ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿಕಾರಿಪುರದ ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ಸರ್ಕಾರಿ ಬಸ್ ಸೇವೆ ಒದಗಿಸಬೇಕು. ಜಿಲ್ಲೆಯ ವಿವಿಧೆಡೆ ಶಾಲಾ, ಕಾಲೇಜಿಗೆ ಹೋಗಬೇಕಾಗಿರುವುದರಿಂದ ಸರ್ಕಾರಿ ಬಸ್ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಸ್ ವ್ಯವಸ್ಥೆ ಇಲ್ಲದ್ದರಿಂದ ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಕಾಲೇಜು ಮುಗಿಸಿ ಮನೆಗೆ ಬರುವುದಕ್ಕೂ ಭಾರೀ ತೊಂದರೆ ಆಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಮಯಕ್ಕೆ ಬಸ್ ಬಿಡಿ | ಶಿಕಾರಿಪುರದಿಂದ ಬೆಳಗ್ಗೆ 7.30, 8 ಹಾಗೂ 8.30 ಗಂಟೆಗೆ ಹಾಗೂ ಸಂಜೆ 5, 5.30 ಹಾಗೂ 6 ಗಂಟೆಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬಸ್ ಸೌಲಭ್ಯ ನೀಡಬೇಕು.
ವಿದ್ಯಾರ್ಥಿಗಳಾದ ದರ್ಶನ್, ಕೆ.ಎಂ. ರವಿ, ಹರ್ಷ, ಚಂದನ್, ಕೀರ್ತಿ ಉಪಸ್ಥಿತರಿದ್ದರು.