ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಾದ್ಯಂತ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಉಮೇಶ್ ನಾಯ್ಕ ಅವರನ್ನು ಶಿವಮೊಗ್ಗದ ಡಿಸಿಆರ್ಬಿಗೆ ವರ್ಗಾವಣೆ ಮಾಡಲಾಗಿದೆ. ಈ ಸ್ಥಾನಕ್ಕೆ ಚನ್ನಗಿರಿ ಉಪ ವಿಭಾಗದಲ್ಲಿ ಪ್ರಬೇಷನರಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿರುವ ಪ್ರಶಾಂತ್ ಜಿ.ಮುನ್ನೋಳಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ । ಉಂಬ್ಳೇಬೈಲಲ್ಲಿ ಮತ್ತೆ ಶುರುವಾಯ್ತು ಒಂಟಿ ಸಲಗದ ಕಾಟ, ಜನರಲ್ಲಿ ಹೆಚ್ಚಿದ ಆತಂಕ
ಪೊಲೀಸ್ ಇನ್ಸ್ ಪೆಕ್ಟರ್ | ಕೆ.ವಿ.ಕೃಷ್ಣಪ್ಪ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆರ್.ವಸಂತ್ ಕುಮಾರ್ ಅವರನ್ನು ದೊಡ್ಡಪೇಟೆ ವೃತ್ತದಿಂದ ದೊಡ್ಡಪೇಟೆ ಪೊಲೀಸ್ ಠಾಣೆ (ಮೇಲ್ದರ್ಜೆಗೇರಿಸಲಾದ ಹುದ್ದೆ), ಎಂ.ಸುನೀಲ್ ಕುಮಾರ್ ಅವರನ್ನು ಸಾಗರ ಗ್ರಾಮಾಂತರ ವೃತ್ತದಿಂದ ಬೆಂಗಳೂರಿನ ಕೇಂದ್ರ ವಲಯ ಐಜಿಪಿ ಕಚೇರಿಗೆ ವರ್ಗಾಯಿಸಲಾಗಿದೆ.