ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸಾದ ವಿಮಾನ ನಿಲ್ದಾಣಕ್ಕೆ ಅವರದ್ದೇ ಹೆಸರಿಡಬೇಕು ಎಂದು ವೀರಶೈವ ಸಮಾಜದ ಮುಖಂಡ ವಿ.ಸಿ.ಎಸ್.ಮೂರ್ತಿ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಯ ಹರಿಕಾರರಾದ ಬಿ.ಎಸ್.ವೈ. ನಿರಂತರ ಪ್ರಯತ್ನದಿಂದಾಗಿಯೇ ವಿಮಾನ ನಿಲ್ದಾಣಕ್ಕೆ ಮೂರ್ತ ರೂಪ ಸಿಕ್ಕಿದೆ. ಹೀಗಾಗಿ, ಯಡಿಯೂರಪ್ಪ ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕಿಡಬೇಕು ಎಂದು ಹೇಳಿದರು.
ಸಿಎಂ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ ಮತ್ತು ಪ್ರಸಾದ ಹಂಚುವ ಕಾರ್ಯಕ್ರಮವನ್ನು ಸಮಾಜದಿಂದ ಏರ್ಪಡಿಸಲಾಗಿದೆ ಎಂದರು. ಸಮಾಜದ ಪ್ರಮುಖರಾದ ಎನ್.ಜೆ.ರಾಜಶೇಖರ್, ಮಹೇಶ್ವರಪ್ಪ, ಗಂಗಾಧರಯ್ಯ, ಜಗನ್ನಾಥ್ ಉಪಸ್ಥಿತರಿದ್ದರು.
ಜಾತ್ಯತೀತ ಬೆಂಬಲ | ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ನಗರದ ಹಳೆಯ ಜೈಲು ಆವರಣದಲ್ಲಿ ಆಯೋಜಿಸಿರುವ ನಮ್ಮೊಲುಮೆಯ ಅಭಿನಂದನಾ ಕಾರ್ಯಕ್ರಮಕ್ಕೆ 20ಕ್ಕೂ ಅಧಿಕ ಸಮಾಜದವರು ಬೆಂಬಲ ನೀಡಿದ್ದಾರೆ. ಜತೆಗೆ, ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಗಳಲ್ಲಿ ಬಂಟರ ಸಮಾಜದ ಮುಖಂಡರಾದ ಸತೀಶ್ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ಪುಷ್ಪಶೆಟ್ಟಿ, ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ಘನಿ, ಅಲ್ಪಸಂಖ್ಯಾತರ ಮುಖಂಡರಾದ ಮನ್ಸೂರ್, ಸೈಯದ್ ಜಮೀರ್ ಅಹಮ್ಮದ್, ಪಾಶಾ, ನೂರ್ ಅಹಮ್ಮದ್, ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧೀ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾ ಬ್ರಾಹ್ಮಣ ಸಮಾಜದ ಮುಖಂಡ ಮಾ.ಸ.ನಂಜುಂಡಸ್ವಾಮಿ, ಎಸ್.ದತ್ತಾತ್ರಿ, ಮಧುಸೂದನ್, ಎಂ.ಶಂಕರ್, ವೇಣುಗೋಪಾಲ್, ಸುಮಿತ್ರಮ್ಮ, ಛತ್ರಪತಿ ಶಿವಾಜಿ ಮರಾಠ ಸಮಾಜದ ಮುಖಂಡ ರಮೇಶ್ ಬಾಬು ಜಾದವ್, ಸುರೇಶ್, ಚಂದ್ರರಾವ್, ದಿನೇಶ್ ಚವ್ಹಾಣ್, ಗೌಡಸಾರಸ್ವತ ಸಮಾಜದ ದೇವದಾಸ್ ನಾಯ್ಕ್, ಬಾಹುಸಾರ ಕ್ಷತ್ರಿಯ ಸಮಾಜದ ಸುರೇಶ್, ಮೊಗವೀರ ಮತ್ತು ಗಂಗಾಮತ ಸಂಘದ ಕೆ.ವಿ.ಅಣ್ಣಪ್ಪ, ದೇವಾಂಗ ಸಮಾಜದ ರಾಜೇಶ್, ಭೋವಿ ಸಮಾಜದ ವೀರಭದ್ರಪ್ಪ ಪೂಜಾರ್, ತಮಿಳು ಸಮಾಜದ ಎನ್.ಮಂಜುನಾಥ್, ಸಾಧುಶೆಟ್ಟಿ ಸಮಾಜದ ವಿ.ರಾಜು, ಈಡಿಗ ಸಮಾಜದ ದೇವಪ್ಪ, ಕ್ರೈಸ್ತ ಸಮಾಜದ ಯೇಸುದಾಸ್, ರೆಡ್ಡಿ ಸಮಾಜದ ಶ್ರೀನಿವಾಸ್, ಮೋಹನ್ರೆಡ್ಡಿ, ವಾಲ್ಮಿಕಿ ಸಮಾಜದ ನಾಗರಾಜ್, ಯಾದವ್ ತಮಿಳು ಸಮಾಜದ ರವಿಚಂದ್ರ, ನಾಮದೇವ ಸಮಾಜದ ಸತೀಶ್ ಹಲವರು ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡಿದರು.