ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಏರ್ಪಡಿಸಿದ್ದ ಸಿವಿಲ್ ಪೊಲೀಸ್ ಕಾನ್ಸ್ ಟೆಬಲ್ ಪರೀಕ್ಷೆಗೆ ಅಭ್ಯರ್ಥಿ ಹಾಜರಾಗದೇ ಬೇರೊಬ್ಬರನ್ನು ಪರೀಕ್ಷೆ ಬರೆಯಲು ಕೂರಿಸಿದ ಘಟನೆ ಬೆಳಕಿಗೆ ಬಂದಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಇಲ್ಲಿನ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ನಡೆದಿತ್ತು. ಲಿಖಿತ ಪರೀಕ್ಷೆಗೆ ಅಭ್ಯರ್ಥಿ ಹಾಜರಾಗದೇ ಇನ್ನೊಬ್ಬ ಆತನ ಪರವಾಗಿ ಪರೀಕ್ಷೆಗೆ ಕುಳಿತಿದ್ದಾನೆ.
READ | ಶಿವಮೊಗ್ಗದಲ್ಲಿ ಮೂರು ತಿಂಗಳ ಬಳಿಕ ಮತ್ತೆ ಬಲಿ ಪಡೆದ ಕೊರೊನಾ
ಪರಿಶೀಲನೆ ವೇಳೆ ಈ ಕೃತ್ಯ ಎಸಗಿರುವುದು ಗಮನಕ್ಕೆ ಬಂದಿದೆ. ವಂಚಿಸಲು ಯತ್ನಿಸಿದ ಆರೋಪದ ಮೇರೆಗೆ ಅಕ್ಷಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಈತನಿಗೆ ಶಿವು ಎಂಬಾತ ಸಾಥ್ ನೀಡಿದ್ದ ಎನ್ನಲಾಗಿದೆ. ಆದರೆ, ಪರೀಕ್ಷೆ ಬರೆದ ವ್ಯಕ್ತಿಯ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.
https://www.suddikanaja.com/2021/03/10/opportunity-for-inter-corporation-transfer-in-ksrtc/