ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ಹಿನ್ನೆಲೆ ನಗರದಲ್ಲಿ ಖಡಕ್ ರೂಲ್ ಜಾರಿಯಲ್ಲಿದೆ. ಒಂದೆಡೆ ಪೊಲೀಸರು ಅನಗತ್ಯವಾಗಿ ಓಡಾಡುವವರ ಮೇಲೆ ಪ್ರಕರಣ ದಾಖಲಿಸುತ್ತಿದ್ದರೆ, ಮಹಾನಗರ ಪಾಲಿಕೆಯ ತಂಡಗಳು ನಗರದಾದ್ಯಂತ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸುತ್ತಿವೆ.
READ | ಹೇಗಿದೆ ಲಾಕ್ ಡೌನ್ ಮೊದಲ ದಿನ,ಜನ,ವಾಹನ ಸಂಚಾರ ಇದೆಯೇ, ಹೇಗಿದೆ ಪೊಲೀಸ್ ಸೆಕ್ಯೂರಿಟಿ?
ಎಂಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಮಾಸ್ಕ್ ಧರಿಸದೇ ಬಂದ ಜನ ಮತ್ತು ವ್ಯಾಪಾರಿಗಳಿಗೆ ಪಾಲಿಕೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ನಗರದ ಅಮೀರ್ ಅಹ್ಮದ್ ವೃತ್ತ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯೂ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ.