ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಸುರಕ್ಷಾ ಪಡೆಯಿಂದ ಟೆಲಿಮೆಡಿಸನ್ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಸೇವಾ ಭಾರತಿ ಕರ್ನಾಟಕದ ಮುಖ್ಯಸ್ಥ ಡಾ. ರವಿಕಿರಣ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರು ಮತ್ತವರ ಅವಲಂಬಿತರಿಗೆ ವೈದ್ಯಕೀಯ ಮಾಹಿತಿ, ಸೇವೆ ನೀಡುವ ಉದ್ದೇಶದಿಂದ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.
https://www.suddikanaja.com/2021/04/19/covid-control-room-in-all-talukas-of-shivamogga/
ಕೊರೊನಾ ಪ್ರಕರಣಗಳು ಏರಿಕೆ ಆಗುತ್ತಿದ್ದು, ಸಹಜವಾಗಿಯೇ ಜಿಲ್ಲಾಡಳಿತದ ಮೇಲೆ ಅಧಿಕಹೊರೆ ಇದೆ. ಇದನ್ನು ಸ್ಚಲ್ಪಮಟ್ಟಿಗಾದರೂ ಇಳಿಕೆ ಮಾಡಬೇಕು ಎಂಬ ಕಾರಣಕ್ಕೆ ಸೇವಾ ಭಾರತಿ ಕರ್ನಾಟಕ ಐಎಂಎ, ಕೋವಿಡ್ ಸುರಕ್ಷಾ ಪಡೆ ಹಾಗೂ ನಗರದ ಹಲವಾರು ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ‘ಟೆಲಿ ಮೆಡಿಸನ್ ಕೇಂದ್ರ’ವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಟೆಲಿ ಮೆಡಿಸನ್ ಕೇಂದ್ರದ ಉದ್ಘಾಟನೆ ಮೇ 4ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕೇಂದ್ರಕ್ಕೆ ಸರ್ಕಾರದಿಂದ ಎಲ್ಲ ನೆರವು ಒದಗಿಸಲಾಗುವುದು.
– ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಏನೇನು ಸೇವೆ ಲಭ್ಯ | ಸೋಂಕಿತರು ಹಾಗೂ ಆರೋಗ್ಯದ ಇನ್ನಿತರೆ ತೊಂದರೆಗಳನ್ನು ಹೊಂದಿರುವ ಅನಗತ್ಯವಾಗಿ ಆಸ್ಪತ್ರೆಗಳಿಗೆ ಬರುವುದು, ಊಟ, ಉಪಹಾರಗಳಿಗೆ ಹೊರಗೆ ಬರುವುದನ್ನು ತಪ್ಪಿಸುವಲ್ಲಿ ಕೇಂದ್ರ ಕಾರ್ಯೋನ್ಮುಖವಾಗಲಿದೆ.
ಕೊರೊನಾ ಪರೀಕ್ಷೆಯ ಬಗ್ಗೆ ಮಾಹಿತಿ, ಆಹಾರ, ಔಷಧಿ, ಆಂಬ್ಯುಲೆನ್ಸ್ ಸೇವೆ, ರಕ್ತ ಪರೀಕ್ಷೆ ಮನೆ ಬಾಗಿಲಿಗೆ, ಆರೈಕೆ ಕೇಂದ್ರಗಳ ಮಾಹಿತಿ, ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಬೆಡ್ ಸೌಲಭ್ಯಗಳ ಮಾಹಿತಿ, ತಜ್ಞ ವೈದ್ಯರೊಂದಿಗೆ ಸಂವಾದ, ಲಾಡ್ಜ್ ಗಳಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುವವರಿಗೆ ಸಹಾಯ ಹೀಗೆ ಹತ್ತುಹಲವು ಸೇವೆಯನ್ನು ಕೋವಿಡ್ ಕಠಿಣ ಪರಿಸ್ಥಿತಿಯಲ್ಲಿ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರವನ್ನು ಆರಂಭಿಸಲಾಗಿದೆ.
https://www.suddikanaja.com/2020/12/21/health-insurance-to-memcos-members-shivamogga/
ಕ್ವಾರಂಟೈನ್ ನಲ್ಲಿರುವವರಿಗೆ ಅಗತ್ಯ ಸೌಲಭ್ಯ | ಕಾಯಿಲೆಯ ಲಕ್ಷಣಗಳು ಇಲ್ಲದವರು ಹೊರ ಸಮಾಜದ ಸಂಪರ್ಕಕ್ಕೆ ಬರುವುದರಿಂದ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ, ಅವರ ಅಗತ್ಯತೆಗಳನ್ನು ಮನೆಯ ಬಾಗಿಲಿಗೆ ಪೂರೈಸುವ ಕೆಲಸ ಮಾಡಲಾಗುವುದು. ಈ ಮೂಲಕ ಅವರು ಕ್ವಾರಂಟೈನ್ ನಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ಜತೆಗೆ, ರಕ್ತದ ಕೊರತೆ ಉಂಟಾಗದಂತೆ 500ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಜೂನ್ ಅಂತ್ಯದ ವೇಳೆಗೆ ಕನಿಷ್ಠ 3 ಸಾವಿರ ಯೂನಿಟ್ ರಕ್ತ ಖರೀದಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಆರ್.ಎಸ್.ಎಸ್ ಮುಖಂಡ ಪಟ್ಟಾಭಿರಾಮ್, ಶಾಸಕ ಅಶೋಕ್ ನಾಯ್ಕ್, ಕೆ.ಈ.ಕಾಂತೇಶ್, ಡಿ.ಎಸ್.ಅರುಣ್, ಸುಧೀಂದ್ರ, ಜ್ಯೋತಿಪ್ರಕಾಶ್ ಉಪಸ್ಥಿತರಿದ್ದರು.