ಕೊರೊನಾ ರಣಕೇಕೆ ಜಿಲ್ಲೆಯಲ್ಲಿ ಮುಂದುವರಿದ ಸಾವಿನ ಆರ್ಭಟ, ಶಿವಮೊಗ್ಗದಲ್ಲಿ ಡಬಲ್, ಹೊಸನಗರದಲ್ಲಿ ಸಿಂಗಲ್ ಸೆಂಚ್ಯೂರಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ರಣಕೇಕೆ ಶುಕ್ರವಾರ ಮತ್ತೆ 14 ಜನರನ್ನು ಬಲಿ ಪಡೆದಿದೆ.

READ | ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ ಆಪ್ತ ಸಮಾಲೋಚನೆ, ಇಲ್ಲಿದೆ ಟೋಲ್ ಫ್ರಿ ನಂಬರ್

540 ಮಂದಿಗೆ ಕೊರೊನಾ ಸೋಂಕು ತಗುಲಿದೆ.‌ ಇದರಲ್ಲಿ 26 ವಿದ್ಯಾರ್ಥಿಗಳು, 3 ಸಿಬ್ಬಂದಿ ಇದ್ದಾರೆ. ಚಿಕಿತ್ಸೆ ಪಡೆದು 463 ಜನ ಗುಣಮುಖರಾಗಿದ್ದಾರೆ.‌
4 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ | ಜಿಲ್ಲೆಯಲ್ಲಿ ನಿರಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 4,201ಕ್ಕೆ‌ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 516, ಡಿಸಿಎಚ್‌ಸಿನಲ್ಲಿ 135, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 101, ಖಾಸಗಿ ಆಸ್ಪತ್ರೆಯಲ್ಲಿ 358, ಹೋಂ ಐಸೋಲೇಷನ್‌ ನಲ್ಲಿ 3,001, ಟ್ರಿಯೇಜ್‌ ನಲ್ಲಿ 90 ಜನ ಸೋಂಕಿತರಿದ್ದಾರೆ.

READ | ಮರಕ್ಕೆ ಅಪ್ಪಳಿಸಿದ ಟ್ಯಾಂಕರ್, ಪಾದಾಚಾರಿ ಸ್ಥಳದಲ್ಲೇ ಸಾವು

ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ ಇಂದು ಅತಿ ಹೆಚ್ಚು 217, ಭದ್ರಾವತಿ 34, ಶಿಕಾರಿಪುರ 47, ತೀರ್ಥಹಳ್ಳಿ 15, ಸೊರಬ 93, ಸಾಗರ 15, ಹೊಸನಗರ 104, ಬಾಹ್ಯ ಜಿಲ್ಲೆಯ 15 ಜನರಲ್ಲಿ ಸೋಂಕು ಪತ್ತೆಯಾಗಿದೆ.

error: Content is protected !!