ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿರುವ ಸಾರ್ವಜನಿಕರು ಮುಂದುವರಿದು ಮತದಾನ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.
https://www.suddikanaja.com/2021/05/17/ambulance-asking-heavy-amount-to-transport-dead-body/
ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನೆಟ್ವರ್ಕ್ ವಿಷಯ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಕರೂರು ಬಾರಂಗಿ ಹೋಬಳಿಯ ಕಾರಣಿ, ಕಟ್ಟಿನಕಾರು ಗ್ರಾಮಗಳಲ್ಲಿ ಈಗಾಗಲೇ ‘ನೋ ನೆಟ್ವರ್ಕ್, ನೋ ವೋಟಿಂಗ್’ ಅಭಿಯಾನ ಆರಂಭವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಈ ವಿಷಯ ಭಾರಿ ಸದ್ದು ಮಾಡುತ್ತಿದೆ. ಆನ್ಲೈನ್ ತರಗತಿಗಳು ಆರಂಭವಾದಾಗ ವಿದ್ಯಾರ್ಥಿಗಳು ಶಾಸಕರಿಗೆ ಭೇಟಿ ಮಾಡಿ ಈ ಬಗ್ಗೆ ಗಮನ ಕೂಡ ಸೆಳೆದಿದ್ದರು. ಆದರೂ ಸಮಸ್ಯೆಗೆ ಪರಿಹಾರ ಮಾತ್ರ ಇದುವರೆಗೆ ಸಿಕ್ಕಿಲ್ಲ.
2 ಸಾವಿರ ಮತದಾರರು | ಕಟ್ಟಿನಕಾರು ಕಾರಣಿ ನೆಟ್ವರ್ಕ್ ಹೋರಾಟ ಸಮಿತಿಯು `ನೋ ನೆಟ್ವರ್ಕ್ ನೋ ವೋಟಿಂಗ್’ ಅಭಿಯಾನಕ್ಕೆ ಚಾಲನೆ ನೀಡಿದ್ದು, ಕರೂರು ಹೋಬಳಿಯ ಹಾಳಸಸಿ, ಹೊಸಮನೆ, ಕಾರಣಿ, ಕಟ್ಟಿನಕಾರು ಗ್ರಾಮ ಮತ್ತಿತರ ಗ್ರಾಮಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ.
https://www.suddikanaja.com/2021/02/13/solution-to-internet-problems-set-up-broadband-committee/