ಶಿವಮೊಗ್ಗ: ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ಅಂಗಡಿಯೊoದಕ್ಕೆ ಗುರುವಾರ ರಾತ್ರಿ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕಾಂಡಿಮೆAಟ್ಸ್, ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ.
ಮಹ್ಮದ್ ರಫೀಕ್ ಎಂಬುವವರ ದರ್ವೇಶ್ ಎಂಟರ್ ಪ್ರೈಸಸ್ ಹೆಸರಿನ ದಾಸ್ತಾನು ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ.
ಮಳಿಗೆಯಲ್ಲಿದ್ದ ಪ್ಯಾಕಡ್ ಕಾಂಡಿಮೆoಟ್ಸ್ ಮತ್ತು ಒಂದು ದ್ವಿ ಚಕ್ರವಾಹನ ಸುಟ್ಟು ಸಂಪೂರ್ಣ ಹಾನಿಯಾಗಿದೆ.
* ಏನು ಸುಟ್ಟು ಕರಕಲು: ಇದು ಚಾಕ್ಲೆಟ್, ಕುರುಕುರೆ, ಬಿಸ್ಕತ್ ಕೂಲ್ ಡ್ರಿಂಕ್ಸ್ ಹೋಲ್ ಸೇಲ್ ಮಾರಾಟ ಅಂಗಡಿ ಇದಾಗಿದ್ದು, ಬಾಗಿಲು ಹಾಕಿಕೊಂಡು ಮನೆಗೆ ಹೋದಾಗ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದವರು ಬೆಂಕಿ ಆರಿಸಿದ್ದಾರೆ. ಅಷ್ಟೊತ್ತಿಗೆ ಬಹುತೇಕ ಅಂಗಡಿ ಸುಟ್ಟು ಕರಕಲಾಗಿತ್ತು. ದೊಡ್ಡಪೇಟೆ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ.