ಸುದ್ದಿ ಕಣಜ.ಕಾಂ | DISTRICT | BUSINESS
ಶಿವಮೊಗ್ಗ: ಲಾರಿ ಮಾಲೀಕರು ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಮೂಲಿಯನ್ನು ಹಮಾಲರಿಗೆ ನೀಡುವುದಿಲ್ಲ ಎಂದು ಲಾರಿ ಮಾಲೀಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎ. ತಲ್ಕಿನ್ ಅಹಮ್ಮದ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್ 16ರಿಂದಲೇ ಮಾಮೂಲು ನೀಡುವುದನ್ನು ಸ್ಥಗಿತಗೊಳಿಸಲಾಗುವುದು. ಇಲ್ಲಿಯವರೆಗೆ, ಲಾರಿ ಮಾಲೀಕರೇ ಸರಕುಗಳನ್ನು ಲೋಡ್, ಅನ್ ಲೋಡಿಂಗ್ ಹಮಾಲಿ ಹಣವನ್ನು ನೀಡುತ್ತಿದ್ದರು. ಆದರೆ, ಲಾರಿ ಮಾಲೀಕರೇ ಸಂಕಷ್ಟದಲ್ಲಿದ್ದಾರೆ. ಹಲವು ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯವಹಾರ ಇಲ್ಲದೇ ಆರ್ಥಿಕ ಮುಗ್ಗಟ್ಟು ಎದುರಿಸುತಿದ್ದಾರೆ ಎಂದು ತಿಳಿಸಿದರು.
READ | ಕುವೆಂಪು ವಿವಿ ಕ್ಯಾಂಪಸ್ ಸಂದರ್ಶನ, ವಿವಿಧ ಹುದ್ದೆಗಳ ಭರ್ತಿ, ಯಾರೆಲ್ಲ ಹೆಸರು ನೋಂದಾಯಿಸಬಹುದು?
ವರ್ತಕರ ಮೇಲೆ ಹಮಾಲಿ ಹೊರೆ
ಹಮಾಲಿ ಹಣ ನೀಡುವುದು ವರ್ತಕರ ಜವಾಬ್ದಾರಿ. ಇನ್ಮುಂದೆ ಹಮಾಲಿ ವೆಚ್ಚವನ್ನು ಅವರವರೇ ಭರಿಸಬೇಕು ಎಂದರು.
ಒಕ್ಕೂಟದ ಕಾರ್ಯಾಧ್ಯಕ್ಷ ವೈ.ಎಚ್. ನಾಗರಾಜ್, ಕಾರ್ಯದರ್ಶಿ ಕೆ.ಎನ್. ಭೋಜರಾಜ್, ಬಾಬು, ರಾಘವೇಂದ್ರ ಉಪಸ್ಥಿತರಿದ್ದರು.