ಸುದ್ದಿ ಕಣಜ.ಕಾಂ | CITY | EDUCATION
ಶಿವಮೊಗ್ಗ: ದೇಶದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ. ಆದರೆ, ಅವುಗಳ ಪಲಾಯನ ತಡೆಯುವುದೇ ದೊಡ್ಡ ಕೆಲಸ. ಮೋದಿ ಅವರು ಮಾಡುತಿದ್ದಾರೆ. ಅದಕ್ಕಾಗಿ, ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್. ಅರುಣ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜಿನ ರ್ಯಾಂಕ್ ವಿಜೇತರಿಗೆ ಹಾಗೂ ಕ್ರೀಡಾ ವಿಭಾಗದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
READ | ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, ಎಷ್ಟು ಹುದ್ದೆ ಭರ್ತಿ, ಕೊನೆ ದಿನಾಂಕ, ಮಾಹಿತಿಗಾಗಿ ಕ್ಲಿಕ್ಕಿಸಿ
ಈಗಿನ ಮಕ್ಕಳಿಗೆ ಜವಾಬ್ದಾರಿ ಇದೆ ಹಾಗೂ ಅವಕಾಶಗಳು ಲಭ್ಯ ಇವೆ. ಪ್ರತಿಭಾನ್ವಿತರು ಬೇರೆ ದೇಶಕ್ಕೆ ಹೋಗುವುದನ್ನು ತಡೆಯಲು ಅವರ ಸೇವೆ ನಮ್ಮ ದೇಶಕ್ಕೇ ಸಿಗಬೇಕೆಂಬ ಕಾರಣಕ್ಕೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದರಡಿ ವಿಪುಲ ಅವಕಾಶಗಳಿವೆ. ಅದರ ಸದುಪಯೋಗ ಹೊಂದುವಂತೆ ಸಲಹೆ ನೀಡಿದರು.
ಕಲ್ಚುರಲ್ ಕಾರ್ಯಕ್ರಮದ ಝಲಕ್
ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಇದೇ ವೇದಿಕೆಯಲ್ಲಿ ಸಾಂಸ್ಕೃತಿಕ ದಿನವಾದ ಇಂದು ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳಲ್ಲಿ ಕಂಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಉಪಾಧ್ಯಕ್ಷರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಕೇಶವಮೂರ್ತಿ, ಪ್ರೊ. ಆರ್. ಜಗದೀಶ್, ಪ್ರೊ. ಸದಾಶಿವಪ್ಪ, ಪ್ರೊ. ಕೆ.ಎಂ. ನಾಗರಾಜ್, ಪ್ರೊ. ಹನುಮಂತಪ್ಪ, ಪ್ರೊ. ಖಾಜೀಂ ಷರೀಫ್ ಉಪಸ್ಥಿತರಿದ್ದರು.
https://www.suddikanaja.com/2021/09/01/diesel-theft-in-pesit-college-buses/