ಸುದ್ದಿ ಕಣಜ.ಕಾಂ
ಬೆಂಗಳೂರು: ಇಲ್ಲಿನ ಜೆ.ಪಿ. ನಗರದ ಖಾಸಗಿ ಹೋಟೆಲ್’ವೊಂದರಲ್ಲಿ ಜೂಜಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಜೂಜಾಡುತ್ತಿದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೇದೆಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಇವರ ವಿರುದ್ಧ ಪೊಲೀಸ್ ಆಯುಕ್ತರಿಗೆ ವರದಿ ಕೂಡ ಸಲ್ಲಿಸಲಾಗಿತ್ತು. ಈಗ ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಸಿಲುಕಿದ್ದು ಹೇಗೆ: ಹೋಟೆಲ್ ನಲ್ಲಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿ ಅನ್ವಯ ಪುಟ್ಟೇನಹಳ್ಳಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆರ್.ಎಸ್.ಚೌದರಿ ನೇತೃತ್ವದ ತಂಡ ಹೋಟೆಲ್ ಮೇಲೆ ದಾಳಿ ನಡೆಸಿದೆ. ಆಗ ಪೊಲೀಸರೇ ಇಸ್ಪಿಟ್ ಆಡುತ್ತಿದ್ದರು.
ಅಮಾನತುಗೊಂಡವರು: ಗವಿಸಿದ್ಧಪ್ಪ ಮತ್ತು ಮಲ್ಲೇಶ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ.