ಮತ್ತೊಂದು ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಹೆಲಿಪ್ಯಾಡ್’ನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮೂರು ತಿಂಗಳ ಹಿಂದೆಯೇ ಚರ್ಚೆ ನಡೆದಿತ್ತು. ನನಗೆ ಲಭ್ಯ ಮಾಹಿತಿ ಪ್ರಕಾರ, ಬಿಹಾರದ ಚುನಾವಣೆ ಬಳಿಕ ಕರ್ನಾಟಕ ಸಿಎಂ ಬದಲಾವಣೆ ಸಾಧ್ಯತೆ ಇದೆ ಎಂದು ಬಾಂಬ್ ಸಿಡಿಸಿದರು.
ಬಿಹಾರದಲ್ಲಿ ತೇಜಸ್ವಿ ನೇತೃತ್ವದ ಸರ್ಕಾರ: ಚುನಾವಣೋತ್ತರ ಸಮೀಕ್ಷೆಗಳು ಏನಾದರೂ ಹೇಳಲಿ. ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟ್ ಬಂಧನ್ ಅಧಿಕಾರಕ್ಕೆ ಬರಲಿದೆ. ಯುವಪೀಳಿಗೆ ನಿತೀಶ್ ಕುಮಾರ್ ವಿರುದ್ಧ ಇದ್ದಾರೆ. ಜತೆಗೆ, ಅವರ ಆಡಳಿತದಿಂದ ಭ್ರಮ ನಿರಸರಾಗಿದ್ದಾರೆ. ಅದರಲ್ಲೂ ವಲಸಿಗರ ಸಮಸ್ಯೆಯ ಬಗ್ಗೆ ಅಲ್ಲಿಯ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳದೇ ಇರುವುದೂ ಆಡಳಿತ ವಿರೋಧಿ ಅಲೆ ಸೃಷ್ಟಿಗೆ ಕಾರಣ. ಇದರಿಂದಾಗಿ ಎನ್.ಡಿ.ಎ. ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಗ ನುಡಿದರು.

Leave a Reply

Your email address will not be published. Required fields are marked *

error: Content is protected !!