ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿದೆ. ಮಾತಿನಂತೆ ಸಂಸದ ಬಿ.ವೈ.ರಾಘವೇಂದ್ರ ನಡೆದುಕೊಂಡಿದ್ದಾರೆ.
ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಮೊದಲು ಅರ್ಥ್ ವರ್ಕ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಅದರಡಿ ಎಂಬ್ಯಾಕ್ ಮೆಂಟ್, ಕಿರು ಸೇತುವೆ, ಟ್ರ್ಯಾಕ್ ಡೈವರ್ಷನ್ ಹೀಗೆ ನಾನಾ ಕೆಲಸಗಳು ಆಗಲಿವೆ.
ನವೆಂಬರ್ 27ರಂದು ಟೆಂಡರ್ ಬಿಡ್ಡಿಂಗ್ ಆಗಲಿದೆ. 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
ಮಲೆನಾಡಿಗೇನು ಪ್ರಯೋಜನ
- ಶಿವಮೊಗ್ಗಕ್ಕೆ ನಿತ್ಯ 16 ರೈಲುಗಳ ಓಡಾಟವಿದೆ. ಜತೆಗೆ, ಗೂಡ್ಸ್ ರೈಲುಗಳು ಸಂಚರಿಸುತ್ತವೆ. ಆದರೆ, ಹಳಿಗಳು ಕಡಿಮೆ ಇರುವುದರಿಂದ ಗೂಡ್ಸ್ ರೈಲುಗಳ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿದೆ. ಶಿವಮೊಗ್ಗ ಟೌನ್ ನಿಲ್ದಾಣದಲ್ಲಿ ಕಡಿಮೆ ಪ್ಲಾಟ್ ಫಾರ್ಮ್ ಇರುವುದರಿಂದ ಗೂಡ್ಸ್ ರೈಲುಗಳನ್ನು ಇಲ್ಲಿ ನಿಲ್ಲಿಸಲಾಗದು. ಹೀಗಾಗಿ, ಭದ್ರಾವತಿ ಮತ್ತು ತರೀಕೆರೆಯಲ್ಲಿ ನಿಲ್ಲಿಸಬೇಕಾಗಿತ್ತು. ಬಹುಮುಖ್ಯವಾಗಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಹೆಚ್ಚಿನ ಸಂಖ್ಯೆಯಲ್ಲಿ ಗೂಡ್ಸ್ ರೈಲುಗಳ ಓಡಾಟ ಸಾಧ್ಯವಾಗಲಿದೆ. ಜತೆಗೆ ಕೋಟೆಗಂಗೂರಿನಲ್ಲಿ ಲೈನ್ ಸಂಖ್ಯೆ ಹೆಚ್ಚುವುದರಿಂದ ಅನುಕೂಲವಾಗಲಿದೆ.