ಭಾನುವಾರ ಶಿವಮೊಗ್ಗಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರ ದಿನಚರಿ ಹೇಗಿತ್ತು? ಯಾರಿಗೆ ಭೇಟಿಯಾದರು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಶಿವಮೊಗ್ಗ ಭೇಟಿ ನೀಡಿ, ಇದ್ದ ಎರಡೂವರೆ ಗಂಟೆಗಳ ಕಾಲ ಲವಲವಿಕೆಯಿಂದ ಓಡಾಡಿದರು.
ಮಧ್ಯಾಹ್ನ 12ಕ್ಕೆ ಹೆಲಿಪ್ಯಾಡ್ ಗೆ ಬಂದಿದ್ದ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಲ್ಲಿಂದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿದ್ದ ಮದುವೆಗೆ ಹಾಜರಾದರು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಎಲ್ಲರೂ ಮುಗಿಬಿದ್ದಿದ್ದು ವಿಶೇಷವಾಗಿತ್ತು.
ಅಲ್ಲಿಂದ ಇತ್ತೀಚೆಗೆ ಕೋವಿಡ್ ನಿಂದ ನಿಧನರಾದ ಖ್ಯಾತ ವೈದ್ಯ ಡಾ. ಮಲ್ಲೇಶ್ ಹುಲ್ಲುಮನಿ ಹಾಗೂ ಪುತ್ರನನ್ನು ಕಳೆದುಕೊಂಡ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ವಾಪಸ್ ಬೆಂಗಳೂರಿಗೆ ಹೋದರು.

Leave a Reply

Your email address will not be published. Required fields are marked *

error: Content is protected !!