ಹೇಗಿತ್ತು ಬಿ.ಎಸ್.ಯಡಿಯೂರಪ್ಪ ಅವರ ವೀಕೇಂಡ್?, ಮತ್ತೆ ಸಕ್ರಿಯರಾದ ರಾಜಾಹುಲಿ

 

 

ಸುದ್ದಿ ಕಣಜ.ಕಾಂ | TALUK | POLITICS 
ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತವರು ಕ್ಷೇತ್ರದಲ್ಲಿ ಭಾನುವಾರ ಇಡೀ ದಿನ ಚಟುವಟಿಕೆಯಿಂದ ಇದ್ದರು.
ಶಿವಮೊಗ್ಗದ ವಿನೋಬ ನಗರದಲ್ಲಿರುವ ತಮ್ಮ ನಿವಾಸದಲ್ಲಿ ರಿಲ್ಯಾಸ್ ಮೂಡ್ ನಲ್ಲಿದ್ದ ಯಡಿಯೂರಪ್ಪ ಅವರು ತವರು ಕ್ಷೇತ್ರ ಶಿಕಾರಿಪುರದಲ್ಲಿ ಭಾನುವಾರ ಬೆಳಗ್ಗೆಯಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

https://www.suddikanaja.com/2021/07/27/basavaraj-bommia-a-new-cm-of-karnataka/

ಮಾಲ್ಕೀವ್ಸ್ ನಿಂದ ಬೆಂಗಳೂರಿಗೆ ವಾಪಸ್ ಬಂದ ಬಳಿಕ ಮೊದಲು ಅವರು ಬಂದಿದ್ದೇ ತವರು ಕ್ಷೇತ್ರಕ್ಕೆ. ಕುಟುಂಬದೊಂದಿಗೆ ಕಾಲ ಕಳೆದು ಶಿಕಾರಿಪುರಕ್ಕೆ ಆಗಮಿಸಿದ್ದಾರೆ. ಅಲ್ಲಿಯ ಟ್ರೀಪಾರ್ಕ್ ಕಾಮಗಾರಿಯನ್ನು ವೀಕ್ಷಿಸಿದರು.
ಶಿಕಾರಿಪುರ ಅಭಿವೃದ್ಧಿಯ ಜಪ
ಕುಮದ್ವತಿ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ ಕಾರ್ಯಕರ್ತರ ಸಭೆ ನಡೆಸಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಅಲ್ಲಿಂದಲೇ ವೀಕ್ಷಿಸಿದರು. ನಂತರ, ಜಿಲ್ಲೆಯ ಪ್ರಮುಖರೊಂದಿಗೆ ಸಭೆ ನಡೆಸಿದರು.
ಶಿಕಾರಿಪುರದ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸಿ ಬಾಕಿ ಇರುವ ಎಲ್ಲ ಕಾಮಗಾರಿ, ಪಕ್ಷ ಸಂಘಟನೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಉಪಸ್ಥಿತರಿದ್ದರು.

https://www.suddikanaja.com/2021/01/16/amit-shah-lay-the-foundation-stone-for-a-new-campus-of-rapid-action-force-in-bhadravathi/

error: Content is protected !!