ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗೂ ಗುಜರಾತಿನ ಭಾವನಗರದ ಪಿ.ಎನ್.ಆರ್. ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಜೂ.11ರಂದು ನಗರದ ಜಿಲ್ಲಾ ನಿವೃತ್ತ ನೌಕರ ಸಂಘದ ಆವರಣದಲ್ಲಿ ಮಂಡಿನೋವು ಪಟ್ಟಿ ಚಿಕಿತ್ಸೆ ಶಿಬಿರ (Knee Pain Relief Camp) ನಡೆಯಲಿದೆ.
READ | ಮತ್ತೆ ಏರುಗತಿಯಲ್ಲಿ ಸಾಗಿದ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?
ಈ ಶಿಬಿರದಲ್ಲಿ ಕೇಂದ್ರ ಸರ್ಕಾರದ ಪ್ರಶಸ್ತಿ ವಿಜೇತ ಡಾ.ವಿಜಯನಾಯಕ್ ಮಂಡಿನೋವು ಅನುಭವಿಗಳನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ರಹಿತ ಪಟ್ಟಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವರು. ಆನಂತರ ಸ್ಥಳದಲ್ಲಿಯೆ ವೈದಕೀಯ ತಂಡದಿಂದ ವರ್ಕ್ ಶಾಪ್ ನಲ್ಲಿ ಪಟ್ಟಿ ತಯಾರಿಸಿ ಅಳವಡಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಕೂಡಲೇ ಕರೆ ಮಾಡಿ
ಮಂಡಿನೋವು ಅನುಭವಿಸುತ್ತಿರುವರು ಮತ್ತು ಶಿಬಿರದಲ್ಲಿ ಪಟ್ಟಿ ಅಳವಡಿಸಿಕೊಳ್ಳಬಯಸುವವರು ಗೌರವ ಕಾರ್ಯದರ್ಶಿಯಾದ ಆರ್.ಟಿ. ನಟರಾಜ್ (9448143165)ಗೆ ಕರೆ ಮಾಡಬಹುದು. ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಮೊದಲಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಆರ್.ಟಿ.ಒ. ಆಫೀಸ್ ರಸ್ತೆ, ಡಿ.ಸಿ. ಕಚೇರಿ ಆವರಣ, ಶಿವಮೊಗ್ಗ ಇಲ್ಲಿ ಮುಂಗಡವಾಗಿ ಹೆಸರು ನೋಂದಾಯಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
SSLC Exams | ಶಿವಮೊಗ್ಗದಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ, ಇಲ್ಲಿದೆ ವೇಳಾಪಟ್ಟಿ