ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ ಮೇ 16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿಯ ಮುಖಂಡರು ಜತೆಯಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
READ | ಡಾ.ಧನಂಜಯ ಸರ್ಜಿಗೆ ಬಿಜೆಪಿ ಟಿಕೆಟ್, ಇವರ ಬಗ್ಗೆ ನಿಮಗೆಷ್ಟು ಗೊತ್ತು?
ಮಾಧ್ಯಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಡಾ.ಧನಂಜಯ ಸರ್ಜಿ ಅವರು ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಉತ್ತಮ ವೈದ್ಯರು ಹಾಗಿದ್ದಾರೆ. ಆರ್.ಎಸ್.ಎಸ್.ನಲ್ಲಿ ಇದ್ದವರು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವರಿಷ್ಠರು ಇವರಿಗೆ ಟಿಕೆಟ್ ನೀಡಿರುವುದು ಸ್ವಾಗತಾರ್ಹ ಅವರಿಗೆ ನಮ್ಮ ಕೃತಜ್ಞತೆಗಳು ಎಂದರು.
ಪ್ರಚಾರಕ್ಕೆ 18 ದಿನ ಬಾಕಿ
ಕೇವಲ 18 ದಿನಗಳಲ್ಲಿ ಪ್ರಚಾರ ಮಾಡಬೇಕಾಗಿರುವುದರಿಂದ ಹಲವು ಸಭೆಗಳ ಮೂಲಕ ಮತದಾರರನ್ನು ಒಂದು ಕಡೆ ಸೇರಿಸಿ ಪ್ರಚಾರ ಮಾಡಲಿದ್ದೇವೆ. 1988ರಿಂದಲೂ ನೈರುತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸಂಚಲನವೇ ಮೂಡಿದೆ. ಒಮ್ಮೆ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲಿ ಬಿಜೆಪಿಯೇ ಇಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುತ್ತ ಬಂದಿದೆ. ಈ ಹಿಂದೆ ಗೆದ್ದಿದ್ದ ಬಿಜೆಪಿಯವರೇ ಆಗಿದ್ದ ಆಯನೂರು ಮಂಜುನಾಥ್ ಗೆದಿದ್ದರು. ಬಿಜೆಪಿಯಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಪಕ್ಷ ಯಾರಿಗೆ ಟಿಕೇಟ್ ಕೊಡುತ್ತಾ ಅವರನ್ನೇ ನಾನು ಗೆಲ್ಲುಸುತ್ತೇವೆ ಎಂದು ತಿಳಿಸಿದರು.
30 ವಿಧಾನಸಭೆ ಕ್ಷೇತ್ರದ ವ್ಯಾಪ್ತಿ
ನೈರುತ್ಯ ವಿಧಾನಪರಿಷತ್ ಕ್ಷೇತ್ರವು ಸುಮಾರು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದೆ. ಈ ಬಾರಿ ಮತದಾರರ ಸಂಖ್ಯೆಯು ಹೆಚ್ಚಿದೆ. ಸುಮಾರು 15 ಬಿಜೆಪಿ- ಜೆಡಿಎಸ್ ಶಾಸಕರು ಈ ಬಾರಿ ಇದ್ದಾರೆ. ಬಿಜೆಪಿಯೇ ಹೆಚ್ಚು ನೊಂದಣಿಯನ್ನು ಈ ಬಾರಿ ಮಾಡಿದೆ. ಸುಮಾರು 81,750 ಮತಗಳಿವೆ. ಅದರಲ್ಲಿ ಶಿವಮೊಗ್ಗಲ್ಲಿಯೇ ಹೆಚ್ಚಾಗಿದೆ. ಎಲ್ಲ ಕಡೆ ಪಕ್ಷದ ಸಂಘಟನೆ ಇರುವುದರಿಂದ ಧನಂಜಯ ಸರ್ಜಿ ಮತ್ತು ಜೆಡಿಎಸ್ನ ಬೋಜೇಗೌಡ ಅವರು ಮೊದಲ ಪ್ರಾಶಸ್ತ್ಯದ ಮತಗಳ ಪಡೆದು ಗೆಲ್ಲಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಬಿಜೆಪಿ ಮೈತ್ರಿ ಮುಂದುವರೆಯುವುದರಿಂದ ನಮಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡರು, ಪ್ರಮುಖರಾದ ಶಿವರಾಜು, ಮೋಹನ್ರೆಡ್ಡಿ, ನಾಗರಾಜ್, ದೀನದಯಾಳ್, ಮಂಜುನಾಥ್, ಚಂದ್ರಶೇಖರ್, ಅಣ್ಣಪ್ಪ ಇದ್ದರು.