ಸುದ್ದಿ ಕಣಜ.ಕಾಂ
ಕೆ.ಎಸ್.ಆರ್.ಟಿ.ಸಿ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಂಸ್ಥೆಯ ಬಸ್ ರಸ್ತೆಗೆ ಇಳಿದಿಲ್ಲ. ಆದರೆ, ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
VIDEO REPORT
ಬೆಳಗ್ಗೆ 5.30ರಿಂದಲೇ ಶಿವಮೊಗ್ಗದಿಂದ ರಾಜ್ಯದ ವಿವಿಧೆಡೆಗೆ ಬಸ್ ಸಂಚಾರ ಆರಂಭವಾಗಬೇಕಿತ್ತು. ಆದರೆ, ಸಾರಿಗೆ ಸಂಸ್ಥೆ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದ ಕಾರಣ ಯಾವುದೇ ಬಸ್ ರಸ್ತೆಗಿಳಿದಿಲ್ಲ. ಬೆಳಗ್ಗೆ 9ರ ಹೊತ್ತಿಗೆ 164 ಬಸ್ ಸಂಚರಿಸಬೇಕಿತ್ತು. ಆದರೆ, ಎಲ್ಲ ಬಸ್ ಗಳು ಡಿಪೋದಲ್ಲಿಯೇ ನಿಂತಿವೆ.
ಆಪರೇಷನ್ ಖಾಸಗಿ ಬಸ್ | ಪ್ರಯಾಣಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದಾಗಿ, ಸರ್ಕಾರ ಬಸ್ ನಿಲ್ದಾಣದಲ್ಲಿಯೇ ಖಾಸಗಿ ಬಸ್ ನಿಲುಗಡೆ ಮಾಡಲಾಗಿದೆ. ಆದರೆ, ಪ್ರಯಾಣಿಕರು ಭಾರಿ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಅವರಿಗೂ ಯಾವುದೇ ಪ್ರಯೋಜನವಾಗಿಲ್ಲ.
READ | ಕೆ.ಎಸ್.ಆರ್.ಟಿ.ಸಿ ಮುಷ್ಕರ, ಕುವೆಂಪು ವಿವಿ ಪರೀಕ್ಷೆ ಮುಂದೂಡಿಕೆ ಇಲ್ಲ
ಜಿಲ್ಲೆಯೊಳಗಿಲ್ಲ ಸಮಸ್ಯೆ | ಅಂತರ್ ಜಿಲ್ಲಾ ಪ್ರಯಾಣಕ್ಕೆ ಹೆಚ್ಚು ಸಮಸ್ಯೆಯಾಗಿಲ್ಲ. ಬಹುತೇಕ ಖಾಸಗಿ ಬಸ್ ಗಳ ಮೇಲೆಯೇ ಅವಲಂಬನೆ ಇರುವುದರಿಂದ ಜನರಿಗೆ ತೊಂದರೆ ಆಗಿಲ್ಲ. ಆದರೆ, ಬೆಂಗಳೂರು, ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ವಿವಿಧೆಡೆ ಪ್ರಯಾಣಿಸಬೇಕಾದವರಿಗೆ ಭಾರಿ ತೊಂದರೆ ಉಂಟಾಗಿದೆ.
https://www.suddikanaja.com/2021/04/06/ksrtc-protest/