ಸುದ್ದಿ ಕಣಜ.ಕಾಂ | KARNATAKA | MEETING
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ ತಿದ್ದುಪಡಿ ಬದಲಾವಣೆಗೆ ಅನುಮೋದನೆ ನೀಡಲಾಗಿದೆ.
ನಗರದ ಭಾನುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯಲ್ಲಿ 2012ರ ಉಪವಿಧಿಗಳ ತಿದ್ದುಪಡಿಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಗಿದೆ.
READ | ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ ಮಿನರಲ್ ವಾಟರ್ ಘಟಕ, ಅಗರಬತ್ತಿ ಫ್ಯಾಕ್ಟರಿಯಲ್ಲಿ ಎಷ್ಟು ಜನರಿಗೆ ಉದ್ಯೋಗ?
ವೈಯಕ್ತಿಕವಾಗಿ ಹಾಜರಾದ ಶೇ.100ರಷ್ಟು ಸದಸ್ಯರು ಧ್ವನಿ ಹಾಗೂ ಕೈ ಎತ್ತುವ ಮೂಲಕ ಉದ್ದೇಶಿತ ಉಪವಿಧಿ ತಿದ್ದುಪಡಿಗೆ ಅನುಮೋದನೆ ದೊರೆತಿದೆ. ವಚ್ರ್ಯುವಲ್ ವಿಧಾನದ ಮೂಲಕ ಹಾಜರಾದ 404 ಸದಸ್ಯರಲ್ಲಿ ಪರವಾಗಿ 386 ಸದಸ್ಯರು ಹಾಗೂ ಅದರ ವಿರುದ್ಧವಾಗಿ 18 ಸದಸ್ಯರು ಮತ ಚಲಾವಣೆ ಮಾಡಿದ್ದಾರೆ.
ಸಭೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ವೈಯಕ್ತಿಕವಾಗಿ 548 ಸದಸ್ಯರು, 10,685 ಸದಸ್ಯರು ವಚ್ರ್ಯುವಲ್ ನಲ್ಲಿ ಉಪಸ್ಥಿತರಿದ್ದರು.