ಯುವಕನ ಜೀವ ನುಂಗಿದ ರಸ್ತೆಯಲ್ಲಿನ ಗುಂಡಿ!

 

 

ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹೊಳೆ ಸಮೀಪ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಲಾರಿ ಚಕ್ರಕ್ಕೆ ಸಿಲುಕಿ‌ ಮೃತಪಟ್ಟಿದ್ದಾರೆ.
ಸೊರಬ ತಾಲೂಕಿನ ಕವಡಿ ಗ್ರಾಮದ ನಿವಾಸಿ ಪ್ರವೀಣ್ (28) ಮೃತ ಯುವಕ. ಬ್ರಹ್ಮೇಶ್ವರದಲ್ಲಿರುವ ಸಂಬಂಧಿಕರ ಮನೆಗೆ ಬೈಕಿನಲ್ಲಿ ಹೋಗುತಿದ್ದಾಗ ಎದುರುಗಡೆ ಒಂದು ಟಿಪ್ಪರ್ ಬಂದಿದೆ. ಆಗ ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಪ್ರವೀಣ್ ಅದರಿಂದ ತಪ್ಪಿಸುವ ಯತ್ನದಲ್ಲಿ ಬೈಕ್ ಮೇಲಿನ ನಿಯಂತ್ರಣ ತಪ್ಪಿದೆ. ಕೆಳಗೆ ಬಿದ್ದಿದ್ದಾರೆ. ಟಿಪ್ಪರ್ ಚಾಲಕ‌ ಅಜಾಗರೂಕತೆಯಿಂದ ರಸ್ತೆಯ ಮೇಲೆ ಬಿದ್ದಿದ್ದ ಬೈಕ್ ಸವಾರನ ಮೇಲಿನಿಂದಲೇ ಟಿಪ್ಪರ್ ಓಡಿಸಿದ್ದು, ಗಾಯಾಳು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

READ | ಮಕ್ಕಳೊಂದಿಗೆ ದಾರಿ ದಾಟಬೇಕಾದರೆ ಹುಷಾರ್, ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ವ್ಯಕ್ತಿ ಸಾವು

ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಿಡಿದ ಸ್ಥಳೀಯರು
ಟಿಪ್ಪರ್ ಚಾಲಕ ನಿಲ್ಲಿಸದೇ ಓಡಿಹೋಗಲು ಯತ್ನಿಸಿದಾಗ ಕುಂದಾಪುರ ತಾಲೂಕಿನ ತೆಕ್ಕಟ್ಟೆ ನಿವಾಸಿ ಮಹಮ್ಮದ್ ಸಹೀಮ್ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ‌. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!