ಬಸ್ ಹತ್ತುವಾಗ ಕೆಳಗೆ ಬಿದ್ದು ವಿದ್ಯಾರ್ಥಿನಿಗೆ ಗಾಯ, KSRTC ಬಸ್ ಮುಂದು ವಿದ್ಯಾರ್ಥಿಗಳ ಧರಣಿ

 

 

ಸುದ್ದಿ ಕಣಜ.ಕಾಂ | TALUK | PROTEST
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿರ್ಲಕ್ಷ್ಯ ಖಂಡಿಸಿ ವಿದ್ಯಾರ್ಥಿ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ವಿದ್ಯಾರ್ಥಿನಿ ಹತ್ತುವ ಮುನ್ನವೇ ಬಸ್ ಚಲಿಸಿದ್ದು, ಆಕೆ ಗಾಯಗೊಂಡಿದ್ದು, ಚಾಲಕನ ಕ್ರಮ ಖಂಡಿಸಿ ಬಸ್ ಮುಂದೆಯೇ ಧರಣಿ ಮಾಡಲಾಯಿತು. ಸಾಗರದಲ್ಲಿ ಬಸ್ ಅನ್ನು ತಡೆದು ಪ್ರತಿಭಟಿಸಲಾಯಿತು.

VIDEO REPORT

READ | ಹೊಸ ವೇಳಾಪಟ್ಟಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿ ಸಮೂಹ, ಬದಲಿಸದಿದ್ದರೆ ತರಗತಿ ಬಹಿಷ್ಕಾರ ಎಚ್ಚರಿಕೆ

ಶಿವಮೊಗ್ಗ-ಸಾಗರ ಮಾರ್ಗವಾಗಿ ಚಲಿಸುವ ಕೆಎಸ್.ಆರ್.ಟಿಸಿ.ಬಸ್ ಆನಂದಪುರ ಸಮೀಪದಲ್ಲಿ ವಿದ್ಯಾರ್ಥಿನಿ ಬಸ್ ಹತ್ತುವ ಮೊದಲೇ ಚಲಿಸಿದ ಕಾರಣ ವಿದ್ಯಾರ್ಥಿನಿ ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಚಿನ್ಮಯ್, ಅಜಿತ್ ಕೇಶವ್, ರೋಷನ್, ವಾಗೇಶ್, ಎಂ.ಎನ್.ಅಜಿತ್, ಸಂಚಿತಾ, ಮಾಲತಿ, ಜ್ಯೋತಿ, ಸಹನಾ, ನೇಹಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!