Bhadravathi | ಭದ್ರಾವತಿಯಲ್ಲಿ ಪೊಲೀಸರ ಭರ್ಜರಿ‌ ಕಾರ್ಯಾಚರಣೆ, ನಾಲ್ವರ ಬಂಧನ

police

 

 

  • ಖಚಿತ ಮಾಹಿತಿಯ ಮೇರೆಗೆ ಗಾಂಜಾ ಸಹಿತ ನಾಲ್ವರ ಬಂಧನ, ಹಳೇ‌ನಗರ ಠಾಣೆಯಲ್ಲಿ ಪ್ರಕರಣ ದಾಖಲು
  • 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ, 800 ರೂ ನಗದು ಹಣ, 3 ಮೊಬೈಲ್‌ ಫೋನ್‌ ಗಳು ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿ ಚಕ್ರ ವಾಹನಗಳು ಸೀಜ್

ಸುದ್ದಿ ಕಣಜ.ಕಾಂ | TALUK | 30 AUG 2022
ಭದ್ರಾವತಿ: ಹೊಳೆಹೊನ್ನೂರು ರಸ್ತೆಯಿಂದ ಹೊಸ ಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದ ಕಚ್ಚಾರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತಿದ್ದ ನಾಲ್ವರನ್ನು ಬಂಧಿಸಲಾಗಿದೆ.
ಭದ್ರಾವತಿ ಪಟ್ಟಣದ ಅಮೀರ್‌ ಜಾನ್‌ ಕಾಲೋನಿ ಮೊಹಮ್ಮದ್‌ ಖಾಲಿದ್‌(21), ಸೀಗೇಬಾಗಿಯ ಮೊಹಮ್ಮದ್‌ ಸಾಹಿಲ್‌(18), ಸಯ್ಯದ್ ಅರ್ಭಾಜ್‌(26), ಅನ್ವರ್‌ ಕಾಲೋನಿಯ ಮೊಹಮ್ಮದ್‌ ಅರ್ಶನ್‌(23) ಎಂಬುವವರನ್ನು ಬಂಧಿಸಲಾಗಿದೆ.
ಅಂದಾಜು ₹69,000 ಮೌಲ್ಯದ ಒಟ್ಟು 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ, 800 ರೂ ನಗದು ಹಣ, 3 ಮೊಬೈಲ್‌ ಫೋನ್‌ ಗಳು ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

READ | ಪಾತ್ರೆ ತೊಳೆಯುತಿದ್ದ ಮಹಿಳೆಯ ಚಿನ್ನದ ಸರ ದೋಚಿದ್ದ ಯುವಕನಿಗೆ 7 ವರ್ಷ ಜೈಲು

4 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಉಪ ವಿಭಾಗದ ಎ.ಎಸ್‌.ಪಿ, ಭದ್ರಾವತಿ ನಗರ ವೃತ್ತ ಸಿಪಿಐ ಹಾಗೂ ಹಳೆನಗರ ಪೊಲೀಸ್‌ ಠಾಣೆಯ ಸಿಬ್ಬಂದಿ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಭದ್ರಾವತಿ ಹಳೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2021/05/14/banana-stem-entrepreneur/

Leave a Reply

Your email address will not be published. Required fields are marked *

error: Content is protected !!