Court News | ಪಾತ್ರೆ ತೊಳೆಯುತಿದ್ದ ಮಹಿಳೆಯ ಚಿನ್ನದ ಸರ ದೋಚಿದ್ದ ಯುವಕನಿಗೆ 7 ವರ್ಷ ಜೈಲು

Judgement

 

 

ಸುದ್ದಿ ಕಣಜ.ಕಾಂ | TALUK | 30 AUG 2022
ಶಿವಮೊಗ್ಗ: ಭದ್ರಾವತಿ ತಾಲೂಕಿನ ಬಾಳೆ ಮಾರನಹಳ್ಳಿ‌ ಗ್ರಾಮದಲ್ಲಿ ಮನೆಯ ಹತ್ತಿಲಿನಲ್ಲಿ‌ ಪಾತ್ರೆ ತೊಳೆಯುತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ‌ ಸರ, ಬೆಳ್ಳಿಯ ಕರಡಿಗೆಯನ್ನು ಕಿತ್ತು ಪರಾರಿಯಾಗಿದ್ದ ವ್ಯಕ್ತಿಗೆ ಏಳು‌ ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

READ | ಕೆರೆ, ಬಾವಿಗೆ ಬಣ್ಣ ಲೇಪಿತ ಗಣಪತಿ ವಿಗ್ರಹ ವಿಸರ್ಜಿಸಿದರೆ ₹10,000 ದಂಡ, KSPCB ಕಾನೂನು‌ ಹೇಳುವುದೇನು?

ಭದ್ರಾವತಿ ತಾಲೂಕಿನ ತಿಮ್ಲಾಪುರ ತಾಂಡಾ ನಿವಾಸಿ‌ ಜಯಾ ನಾಯ್ಕ ಅಲಿಯಾಸ್ ಸುನೀಲ್(23) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ನಾಲ್ಕನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಧೀಶ ಶಶಿಧರ್ ಅವರು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ರತ್ನಮ್ಮ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!