Kiccha Sudeep | ಪುಣ್ಯಕೋಟಿ ರಾಯಭಾರಿಯಾಗಿ ಕಿಚ್ಚ ಸುದೀಪ್

Kiccha sudeep

 

 

ಸುದ್ದಿ ಕಣಜ.ಕಾಂ | KARNATAKA | 03 SEP 2022
ಬೆಂಗಳೂರು: ಪುಣ್ಯಕೋಟಿ ರಾಯಭಾರಿಯಾಗಿ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರನ್ನು ನೇಮಕ ಮಾಡಲಾಗಿದೆ.
ಮೂಲತಃ ಶಿವಮೊಗ್ಗದವರಾದ ಸುದೀಪ್ ಅವರು ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಈಗ ಯಾವುದೇ ಸಂಭಾವನೆಯನ್ನು ಪಡೆಯದೇ ಪುಣ್ಯ ಕೋಟಿ ರಾಯಭಾರಿಯಾಗಲು ಸುದೀಪ್ ಒಪ್ಪಿಗೆ ನೀಡಿದ್ದಾರೆ.

ಸುದೀಪ್ ಅವರು ಪುಣ್ಯಕೋಟಿ ದತ್ತು ಯೋಜನೆಗೆ ರಾಯಭಾರಿಯಾಗಲು ಒಪ್ಪಿರುವುದು ಆನೆಬಲ ಬಂದಂತಾಗಿದೆ.
| ಪ್ರಭು ಚವ್ಹಾಣ್, ಪಶುಸಂಗೋಪನಾ ಸಚಿವ

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಈ ವಿಷಯವನ್ನು ಪ್ರಕಟಿಸಿದರು.
ಯಾವುದೇ ಸಂಭಾವನೆ ಇಲ್ಲದೇ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದು, ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನದ ನಿಮಿತ್ತ ಅವರನ್ನು ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಬಗ್ಗೆ ಅಧಿಕೃತ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಸುದೀಪ್ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಚವ್ಹಾಣ್ ಅವರು, `ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈಜೋಡಿಸಿರುವುದು ಸ್ವಾಗತಾರ್ಹ. ಗೋಮಾತೆಯ ರಕ್ಷಣೆಯಲ್ಲಿ ನಾವೆಲ್ಲರೂ ಭಾಗವಹಿಸೋಣ’ ಎಂದು ಹೇಳಿದ್ದಾರೆ.

https://suddikanaja.com/2021/12/04/veteran-kannada-cinema-actor-doddanna-recalled-the-days-of-bhadravati-and-he-spoke-about-current-cinemas/

Leave a Reply

Your email address will not be published. Required fields are marked *

error: Content is protected !!