Arrest | ಉದ್ಯಮಿಯ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್, ಪೊಲೀಸರ ಭರ್ಜರಿ ಕಾರ್ಯಾಚರಣೆ

police

 

 

  • ಶಿರಾಳಕೊಪ್ಪದಲ್ಲಿ ಹಣಕಾಸಿನ ವಿಚಾರಕ್ಕೆ ನಡೆದಿದ್ದ ಗಲಾಟೆ,‌ಚಾಕು ಇರಿದು ಪರಾರಿಯಾಗಿದ್ದ ಆರೋಪಿ
  • ಉದ್ಯಮಿಯ ಕೊಲೆ ಮಾಡಿದ ಆರೋಪದ ಮೇರೆಗೆ ಮೇಸ್ತ್ರಿಯನ್ನು ಬಂಧಿಸಿದ ಪೊಲೀಸರ ತಂಡ

ಸುದ್ದಿ ಕಣಜ.ಕಾಂ‌ | TALUK | 3 SEP 2022
ಶಿಕಾರಿಪುರ‌: ತಾಲೂಕಿನ ಶಿರಾಳಕೊಪ್ಪದಲ್ಲಿ ಉದ್ಯಮಿಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ.
ಸೊರಬ ತಾಲೂಕು ಚನ್ನಾಪುರ ಗ್ರಾಮದ ಕೊಟ್ರೇಶ್ ಅಲಿಯಾಸ್ ಕೋಟೇಶ್ವರ್(42) ಬಂಧಿತ ಆರೋಪಿ. ಈತ ಆಗಸ್ಟ್ 27ರಂದು ಶಿರಾಳಕೊಪ್ಪ ಗಾಂಧಿನಗರದ ಉದ್ಯಮಿ ಎ.ಆರ್.ದಯಾನಂದ್(69) ಹಾಗೂ ಅವರ ಪುತ್ರ ರಾಘವೇಂದ್ರ (42) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ದಯಾನಂದ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಚಿಕಿತ್ಸೆ ಪಡೆದು ರಾಘವೇಂದ್ರ ಗುಣಮುಖರಾಗುತಿದ್ದಾರೆ ಎಂದು ತಿಳಿದುಬಂದಿದೆ.

READ | ಶಿರಾಳಕೊಪ್ಪದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದು ಕೊಲೆ

ಆರೋಪಿ ಬಂಧನಕ್ಕೆ ವಿಶೇಷ ತಂಡ
ಕೊಟ್ರೇಶ್ ಅವರ ಬಂಧನಕ್ಕೆ ತಂಡ ರಚಿಸಲಾಗಿತ್ತು. ಶಿಕಾರಿಪುರ ಡಿವೈಎಸ್.ಪಿ ಶಿವಾನಂದ್ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಜಿ.ಲಕ್ಷ್ಮಣ್, ಶಿರಾಳಕೊಪ್ಪ ಪಿಎಸ್.ಐ ಟಿ.ರಮೇಶ್, ಸಿಬ್ಬಂದಿಯ ತಂಡ ಕಾರ್ಯಾಚರಣೆ ಕೈಗೊಂಡು ಸೊರಬ ತಾಲ್ಲೂಕಿನ ಗೇರುಕೊಪ್ಪ ಕ್ರಾಸ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ.

https://suddikanaja.com/2021/11/22/rowdy-sheeter-bachan-arrested-by-shivamogga-police-at-bombay/

Leave a Reply

Your email address will not be published. Required fields are marked *

error: Content is protected !!