ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅಂಗಡಿಯೊಂದರಲ್ಲಿ ಕೇಳಿದ ಸಾಮಗ್ರಿ ಇಲ್ಲ ಎಂದು ಹೇಳಿದ್ದಕ್ಕೆ ಮಾಲೀಕನ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಮಿಳಘಟ್ಟದಲ್ಲಿ ಬುಧವಾರ ಸಂಭವಿಸಿದೆ.
ಪದ ಕಣಜ 13 | ಕೊರೊನಾ ಟೈಂನಲ್ಲಿ ಕಾಮನ್ ಆದರೂ ‘ಕರ್ಫ್ಯೂ’ಗೆ ಇರುವ ಇತಿಹಾಸವೇನು ಗೊತ್ತಾ?
ಅಂಗಡಿ ಮಾಲೀಕ ಭೀಮಾನಂದ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಮಿಳಘಟ್ಟ ನಿವಾಸಿ ಶಹಬಾಜ್ ಹಾಗೂ ಆತನ ಸ್ನೇಹಿತರು ಅಂಗಡಿಗೆ ಬಂದಿದ್ದು ಸಾಮಗ್ರಿಯನ್ನು ಕೇಳಿದ್ದಾರೆ. ಇಲ್ಲವೆಂದು ಹೇಳಿದ್ದಕ್ಕೆ `ಏನು ಕೇಳಿದ್ದರು ಇಲ್ಲವೆಂದೇ ಉತ್ತರಿಸುತ್ತೀರಿ’ ಎಂದು ಕೆಂಡಾಮಂಡಲಗೊಂಡು ಹಲ್ಲೆ ಮಾಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.