ಸುದ್ದಿ ಕಣಜ.ಕಾಂ | KARNATAKA | KAPPE HABBA
ಶಿವಮೊಗ್ಗ: ನಮ್ಮಲ್ಲಿ ಈಗಲೂ ಮಳೆ ಬರದಿದ್ದಾಗ ಕಪ್ಪೆಗಳಿಗೆ ಮದುವೆ ಮಾಡಿಸುವ ಸಂಸ್ಕೃತಿಯೊಂದಿದೆ. ಅದರ ಬಗ್ಗೆ ಎಲ್ಲರೂ ಕೇಳಿದ್ದು, ನೋಡಿದ್ದೂ ಇದೆ. ಆದರೆ, ಡಿಸೆಂಬರ್ 18, 19ರಂದು ಆಯೋಜಿಸಿರುವ ‘ಕಪ್ಪೆ ಹಬ್ಬ’ (kappe habba) ಹಾಗಲ್ಲ. ಇದರ ಹಿಂದೆ ಕಪ್ಪೆ ಸಂತತಿಯ ಬಗ್ಗೆ ಕಾಳಜಿ ಇದೆ.
ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಮುಪ್ಪಾನೆ ಪ್ರಕೃತಿ ಶಿಬಿರ (muppane nature camp) ದಲ್ಲಿ ‘ಕಪ್ಪೆ ಹಬ್ಬ’ವನ್ನು ಆಯೋಜಿಸಲಾಗಿದೆ.
ಜಾಗೃತಿಯೇ ಕೇಂದ್ರ ಬಿಂದು
ಕಪ್ಪೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತುಸ್ಥಿತಿ ಈಗ ದೇಶದೆಲ್ಲೆಡೆ ಇದೆ. ಹೀಗಾಗಿ ಇತ್ತೀಚೆಗೆ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಮಂಡೂಕಗಳ ಬಗ್ಗೆ ಜಾಗೃತಿ ಮೂಡಿಸುವ ಹಬ್ಬವೊಂದನ್ನು ಆಯೋಜಿಸಲಾಗಿದೆ.
READ | ಕಳೆದ 20 ದಿನಗಳಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತ, ಚಿಕಿತ್ಸೆಗಾಗಿ 70 ಕಿ.ಮೀ ಪ್ರಯಾಣ!
ರೈತೋಪಯೋಗಿ ಜೀವವೈವಿಧ್ಯತೆಯ ಪ್ರತೀಕ ‘ಕಪ್ಪೆ’ಗಳ ಸಂತತಿ ಅಳಿಯುತ್ತಿದೆ. ಹೀಗಾಗಿ, ಇದರ ಮೇಲೆ ಬೆಳಕು ಚೆಲ್ಲುವುದರೊಂದಿಗೆ ಸಂತತಿ ಉಳಿವಿಗೆ ಮಹತ್ವದ ಹೆಜ್ಜೆ ಇಡಲಾಗಿದೆ.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗ ಹಾಗೂ ಕಾರ್ಗಲ್ ವನ್ಯಜೀವಿ ಉಪ ವಿಭಾಗದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ‘ಕಪ್ಪೆ ಹಬ್ಬ’ ಆಯೋಜಿಸಲಾಗುತ್ತಿದೆ. ಹೀಗಾಗಿ, ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಕಾರ್ಯಕ್ರಮದಲ್ಲಿ ಏನೇನು ಇರಲಿದೆ?
ಡಿ.18ರಂದು ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಸಂಜಯ್ ಮೋಹನ್ (Sanjay mohan) ಉದ್ಘಾಟಿಸುವರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ( ಮಾಹಿತಿ ಮತ್ತು ತಂತ್ರಜ್ಞಾನ ) ರೀತು ಕಕ್ಕರ್ (ritu kakkar) ಭಾಗವಹಿಸುವರು.
ಬೆಳಗ್ಗೆ 11.15 ಮಧ್ಯಾಹ್ನ 12.15ರ ವರೆಗೆ ಉಭಯ ಜೀವಿಗಳ ಪ್ರಪಂಚ- ಸಾಮಾನ್ಯ ಮಾಹಿತಿ ಕುರಿತು ಓಂಕಾರ್ ಪೈ ಮಾತನಾಡುವರು. ಮಧ್ಯಾಹ್ನ 12.15ರಿಂದ 1.15ರ ವರೆಗೆ ‘Secret Life of Frogs’ ಸಾಕ್ಷ್ಯಚಿತ್ರ (documentary) ಪ್ರಸಾರ ಮಾಡಲಾಗುವುದು.
READ | ಶುಗರ್ ಗೆ ರಾಮಬಾಣ ‘ನೀರಾ’, ಶಿವಮೊಗ್ಗದಲ್ಲಿ ಮೊದಲ ಸಲ ಮಾರಾಟ ಆರಂಭ, ಎಲ್ಲಿ ಲಭ್ಯ
ಮಧ್ಯಾಹ್ನ 2ರಿಂದ 3ರ ವರೆಗೆ ‘ಉಭಯಜೀವಿಗಳ ಸಂಶೋಧನೆ ಮತ್ತು ನಾಗರಿಕ ವಿಜ್ಞಾನದ ಅವಶ್ಯಕತೆ’ ಕುರಿತು ಡಾ. ಕೆ.ವಿ.ಗುರುರಾಜ್ ಮಾತನಾಡುವರು. 3.15ರಿಂದ 4ರ ವರೆಗೆ ‘ಉಭಯಜೀವಿಗಳ ಸಂರಕ್ಷಣೆಯಲ್ಲಿ ಡಿಎನ್ಎ ಬಾರ್ ಕೋಡಿಂಗಿನ ಪಾತ್ರ’ ಕುರಿತು ಡಾ. ಪ್ರೀತಿ ಹೆಬ್ಬಾರ್ ಮಾತನಾಡುವರು.
ಸಂಜೆ 4 – 4.45ರ ವರೆಗೆ ಬಿದಿರುಕಪ್ಪೆಗಳಲ್ಲಿ – ಸಂತಾನೋತ್ಪತ್ತಿ, ಪೋಷಕರ ಪಾತ್ರ ಹಾಗೂ ಸಂರಕ್ಷಣೆ ಬಗ್ಗೆ ಡಾ. ಶೇಷಾದ್ರಿ ಕೆ. ಎಸ್. ವಿಷಯ ಮಂಡಿಸುವರು. ನಂತರ, ಪತಂಗಗಳ ಪ್ರಪಂಚ ಕುರಿತು ಬಿ. ಎಂ. ರವೀಂದ್ರಕುಮಾರ್, ಬಳಿಕ ಗುಂಪು ಚರ್ಚೆ ನಡೆಯಲಿದೆ. ಪತಂಗಗಳ ವೀಕ್ಷಣೆ, ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗುವುದು.
19ರಂದು ಕಪ್ಪೆಗಳ ಕೂಗು ಬಗ್ಗೆ ಡಾ. ವಿನೀತ್ ಕುಮಾರ್ ಮಾತನಾಡುವರು. ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಕಪ್ಪೆ ಸಂಶೋಧಕರ ಕೆಲಸಗಳ ಮಂಡನೆ ಮಾಡಲಾಗುವುದು. ನಂತರ ಸಮಾರೋಪ ಸಮಾರಂಭ ನಡೆಯುವುದು.
https://www.suddikanaja.com/2021/03/25/plastic-awareness-by-swr/