ಸುದ್ದಿ ಕಣಜ.ಕಾಂ ಭದ್ರಾವತಿ
SHIVAMOGGA: ಹಳೇ ದ್ವೇಷದಿಂದ ಚಾಕುದಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಐವರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ 3 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ₹65,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಶಿವಮೊಗ್ಗದ ಕೊರಮರಕೇರಿಯ ವಿಜಯ್ ಕುಮಾರ್(26), ಪ್ರವೀಣ್(20), ನವೀನ್(24), ಚೇತನ್(24), ಸಂತೋಷ್(33) ಅವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
READ | ತಂದೆಯ ಸಾವಾದರೂ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಇದು ಹೃದಯ ಕಲಕುವ ಘಟನೆ
ಏನಿದು ಪ್ರಕರಣ?
2018ರ ಜನವರಿ 21ರಂದು ತುಂಗಾನಗರ ಪೊಲೀಸ್ ಠಾಣಾ (Tunga nagar police station) ವ್ಯಾಪ್ತಿಯ ಗೋವಿಂದಪುರ (Govindapura) ಗ್ರಾಮದ ವಾಸಿಗಳಾದ ನವೀನ್ ಸೇರಿದಂತೆ ಇತರರ ಮೇಲಿನ ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗ ಟೌನ್ ಕೊರಮರಕೇರಿ ವಾಸಿಗಳಾದ ವಿಜಯ್ ಕುಮಾರ್, ಪ್ರವೀಣ್, ನವೀನ್, ಚೇತನ್ ಮತ್ತು ಸಂತೋಷ್ ಅವರುಗಳು ಸೇರಿಕೊಂಡು ನವೀನ್ ಮತ್ತು ನಿತಿನ್ ಎಂಬುವವರನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಟ್ಟೆ ಮತ್ತು ಪಕ್ಕೆಗೆ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಇತರರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಗಿನ ತನಿಖಾಧಿಕಾರಿ ತುಂಗಾನಗರ ಠಾಣೆ ಪಿಐ ಬಿ.ಸಿ.ಗಿರೀಶ್ ಅವರು ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಶಿವಮೊಗ್ಗದಲ್ಲಿ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್.ಮಾನು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು.
Ayanur v/s Eshwarappa | ಮತ್ತೆ ಆಯನೂರು-ಈಶ್ವರಪ್ಪ ಟಕ್ಕರ್, ಟಿಕೆಟ್ ಬಗ್ಗೆ ಹೇಳಿದ್ದೇನು?