ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮರಾಠ ಸಮುದಾಯ ಅಭಿವೃದ್ಧಿ ನಿಗಮ ಮತ್ತು ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.
ರಾಜ್ಯ ಸರ್ಕಾರ ನಿಗಮಗಳ ರಚನೆ ಸಂಬಂಧ ತಪ್ಪು ನಿರ್ಧಾರ ಮಾಡಿದೆ. ಒಂದುವೇಳೆ, ಮರಾಠ ನಿಗಮ ಸ್ಥಾಪಿಸಿದ್ದಲ್ಲಿ ರಾಜ್ಯದಲ್ಲಿರುವ ಕೊಂಕಣಿ, ಬಂಟ್ಸ್, ಶೆಟ್ಟರು, ಕೊಡವರು ಸೇರಿ ಇತರ ಭಾಷಿಗರು ನಿಗಮಕ್ಕೆ ಬೇಡಿಕೆ ಇಡುತ್ತಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಳೆಮಡಿಲು ವೆಂಕಟೇಶ್, ಶಂಕ್ರಾ ನಾಯ್ಕ, ಎಚ್.ಎಂ.ಸಂಗಯ್ಯ , ಆಶಾ ಹರೀಶ್ ಉಪಸ್ಥಿತರಿದ್ದರು.