ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಶಿವಮೊಗ್ಗ, ಭದ್ರಾವತಿ ಮತ್ತು ಸಾಗರದಲ್ಲಿ ಕೊರೊನಾ ಸೋಂಕು ನೂರರ ಗಡಿ ದಾಟಿದ್ದು, ಇಂದು ಸಹ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 123, ಭದ್ರಾವತಿಯಲ್ಲಿ 110, ಸಾಗರದಲ್ಲಿ 101, ತೀರ್ಥಹಳ್ಳಿಯಲ್ಲಿ 57, ಶಿಕಾರಿಪುರದಲ್ಲಿ 73, ಹೊಸನಗರದಲ್ಲಿ 30, ಸೊರಬದಲ್ಲಿ 50 ಹಾಗೂ ಬಾಹ್ಯ ಜಿಲ್ಲೆಯ 28 ಜನರಲ್ಲಿ ಸೋಂಕು ದೃಢಪಟ್ಟಿದೆ. ಗುರುವಾರ 572 ಮಂದಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. 812 ಮಂದಿ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.
2,709 ಸಕ್ರಿಯ ಕೇಸ್
ಶಿವಮೊಗ್ಗ ಜಿಲ್ಲೆಯಲ್ಲಿ 2,709 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 58 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್ಸಿಯಲ್ಲಿ 32, ಖಾಸಗಿ ಆಸ್ಪತ್ರೆಯಲ್ಲಿ 12, ಮನೆ ಆರೈಕೆಯಲ್ಲಿ 2,587, ಟ್ರಯಾಜ್ ನಲ್ಲಿ 20 ಮಂದಿ ಇದ್ದಾರೆ.