ಸುದ್ದಿ ಕಣಜ.ಕಾಂ | CITY | ROUTE MARCH
ಶಿವಮೊಗ್ಗ: ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ (shivamogga police) ಶುಕ್ರವಾರ ಸಂಜೆ ರೂಟ್ ಮಾರ್ಚ್ (Route march) ಮಾಡಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಎಸ್.ಪಿ. ಲಕ್ಷ್ಮೀಪ್ರಸಾದ್ (Lakshmiprasad), ಹೆಚ್ಚುವರಿ ಎಸ್.ಪಿ ಡಾ.ವಿಕ್ರಂ ಆಮ್ಟೆ(Vikram aamte), ಡಿವೈಎಸ್ಪಿಗಳ ಮುಂದಾಳತ್ವದಲ್ಲಿ ಸಿಬ್ಬಂದಿ ಸಿಟಿ ರೌಂಡ್ಸ್ ಹಾಕಿದರು. ಪೊಲೀಸ್ ಅಧಿಕಾರಿ, ಸಿಬ್ಬಂದಿ, ಡಿಎಆರ್, ಕೆಎಸ್.ಆರ್.ಪಿ ತುಕಡಿಯೊಂದಿಗೆ ರೂಟ್ ಮಾರ್ಚ್ ನಡೆಸಲಾಯಿತು.
READ | ಹಿಜಾಬ್-ಕೇಸರಿ ವಿವಾದ ಬಗ್ಗೆ ಶಿವಮೊಗ್ಗ ಬಸವಕೇಂದ್ರದ ಡಾ.ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು
ಎಲ್ಲೆಲ್ಲಿ ರೂಟ್ ಮಾರ್ಚ್
ನಗರದ ಮಿಳ್ಳಘಟ್ಟ ಕ್ರಾಸ್ ನಿಂದ ಪ್ರಾರಂಭವಾದ ರೂಟ್ ಮಾರ್ಚ್ ಅಣ್ಣಾ ನಗರ, ಟಿಪ್ಪು ನಗರ ಚಾನೆಲ್ ಏರಿಯಾ, ಪದ್ಮ ಟಾಕೀಸ್, ಜೆ.ಪಿ ನಗರದಿಂದ ನೇತಾಜಿ ಸರ್ಕಲ್, ಆಯನೂರು ಗೇಟ್ ಮುಖಾಂತರ ಬಿ.ಎಚ್.ರಸ್ತೆಯಿಂದ ಅಮೀರ್ ಅಹಮ್ಮದ್ ಸರ್ಕಲ್ ಮುಖಾಂತರ ಗಾಂಧಿ ಬಜಾರ್, ಎಂಕೆಕೆ ರಸ್ತೆ, ಲಷ್ಕರ್ ಮೊಹಲ್ಲಾ ನಂತರ ಬಿ.ಎಚ್.ರಸ್ತೆ ಮೂಲಕ ಡಿಎಆರ್ ಪೊಲೀಸ್ ಮೈದಾನದಲ್ಲಿ ಮುಕ್ತಾಯಗೊಂಡಿತು.
https://www.suddikanaja.com/2021/04/15/mayor-city-rounds-instruct-to-remove-waste-meterial-in-ot-road/