ಸುದ್ದಿ ಕಣಜ.ಕಾಂ | TALUK | MUNICIPAL BUDGET
ಭದ್ರಾವತಿ: ನಗರಸಭೆಯ ಎಸ್ ಎಂ.ವಿ. ಸಭಾಂಗಣದಲ್ಲಿ ಶುಕ್ರವಾರ 2022-23ನೇ ಸಾಲಿನ ಆಯವ್ಯಯ ಬಜೆಟ್ ಮಂಡಿಸಲಾಯಿತು. ಈ ಸಲದ ಬಜೆಟ್ ನಲ್ಲಿ ಭದ್ರಾವತಿಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದಕ್ಕಾಗಿ ಅನುದಾನವನ್ನೂ ಮೀಸಲು ಇಡಲಾಗಿದೆ.
READ | ಎಮ್ಮೆಹಟ್ಟಿ ಗ್ರಾಮದಲ್ಲಿ ನವವಿವಾಹಿತೆ ಸಾವು
ಸ್ವಂತ ಆದಾಯ, ಸರ್ಕಾರದ ಅನುದಾನ ಸೇರಿ 89.96 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಅದರಲ್ಲಿ 88.66 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಅನುಷ್ಠಾನದ ಬಗ್ಗೆ ಉಲ್ಲೇಖಿಸಲಾಗಿದೆ.
ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಅವರು ಮಂಗಡ ಪತ್ರವನ್ನು ಮಂಡಿಸಿದ್ದು, ಸರ್ವ ಸದಸ್ಯರು ಇದಕ್ಕೆ ಸಮ್ಮತ ಸೂಚಿಸಿದರು.
ಭದ್ರಾ ನದಿಗೆ ಸೇರುವ ಕಲುಷಿತ ನೀರು ತಡೆಗೆ ಕ್ರಮ
ಭದ್ರಾ ನದಿಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆಯುವುದಕ್ಕಾಗಿ ಈ ಸಲದ ಬಜೆಟ್ ನಲ್ಲಿ 12 ಕೋಟಿ ರೂಪಾಯಿ ಅನುದಾನ ಮೀಸಲು ಇಡಲಾಗಿದೆ. ಈ ಹಣದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್.ಟಿ.ಪಿ) ನಿರ್ಮಾಣ ಮಾಡಲಾಗುವುದು.
ಸಭೆಯಲ್ಲಿ ಪೌರಾಯುಕ್ತ ಕೆ.ಪರಮೇಶ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಕಂದಾಯ ಅಧಿಕಾರಿ ರಾಜ್ ಕುಮಾರ್, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ ಇತರರು ಉಪಸ್ಥಿತರಿದ್ದರು.
READ | ಕೋಟೆ ಶ್ರೀ ಮಾರಿಕಾಂಬ ಜಾತ್ರೆ, ನೆರವೇರಿದ ಚಪ್ಪರ ಪೂಜೆ, ಯಾವ ದಿನ ಏನು ನಡೆಯಲಿದೆ?
ಬಜೆಟ್ ನಲ್ಲಿ ನೀಡಿರುವ ಯೋಜನೆಗಳೇನು?
- ಪ್ರತಿ ಮನೆಯಿಂದ ಕಸ ಸಂಗ್ರಹಿಸುವುದಕ್ಕಾಗಿ 1 ಕೋಟಿ ರೂಪಾಯಿ ಇಡಲಾಗಿದೆ.
- 74 ಪೌರ ಕಾರ್ಮಿಕರಿಗೆ ವಸತಿ ಮಂಜೂರು ಮಾಡಲು ತಲಾ 7.50 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.
- ಬಿ.ಎಚ್.ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ
- ಎಲ್ಲ 35 ವಾರ್ಡ್ ಗಳ ಮುಖ್ಯ ಮತ್ತು ಅಡ್ಡ ರಸ್ತೆಗಳಲ್ಲಿ ನಾಮಫಲಕ ಅಳವಡಿಕೆ
- 2.17 ಕೋಟಿ ರೂಪಾಯಿ ವೆಚ್ಚದಲ್ಲಿ ಕೆ.ಎಸ್.ಆರ್.ಟಿಸಿ. ಬಸ್ ನಿಲ್ದಾಣ ಪಕ್ಕದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ
- 92 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ
- ಕೊಳೆಗೇರಿ ಪ್ರದೇಶಗಳಲ್ಲಿ 500 ಗುಂಪು ಮನೆ ನಿರ್ಮಾಣ
- ನಗರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ ಅನುಷ್ಠಾನ ಮತ್ತು ನಲ್ಲಿಗಳಿಗೆ ಮೀಟರ್ ಅಳಡಿಕೆ
- ಹಸಿ ತ್ಯಾಜ್ಯದಿಂದ ಗೊಬ್ರ ತಯಾರಿಸಿ ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು 8 ಘಟಕಗಳ ಸ್ಥಾಪನೆ
- ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ, ನಗರಸಭೆ ವ್ಯಾಪ್ತಿಯ ಸ್ವತ್ತುಗಳ ಸಮೀಕ್ಷೆ ನಡೆಸಿ ಇ-ಆಸ್ತಿ ತಂತ್ರಾಂಶ ಅಳವಡಿಕೆ
https://www.suddikanaja.com/2022/03/03/central-government-trying-to-build-clean-india-but-worst-condition-in-beside-national-highway-at-sagar/