ಬೆಂಗಳೂರು: ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಐವರು ಡಿವೈಎಸ್.ಪಿ (ಡಿಟೆಕ್ಟಿವ್) ವೃಂದದ ಸಿಬ್ಬಂದಿಗೆ ಮುಂಬಡ್ತಿ ನೀಡುವ ಮೂಲಕ ದೀಪಾವಳಿ ಕೊಡುಗೆ ನೀಡಿದೆ.
*
*
ಯಾರಿಗೆ ಪ್ರಮೋಷನ್: ಈ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಪ್ರಸಕ್ತ ಲೋಕಾಯುಕ್ತ ಬೆಂಗಳೂರು ವಿಶೇಷ ತನಿಖಾ ತಂಡದ ಡಿವೈಎಸ್.ಪಿ (ಡಿಟೆಕ್ಟಿವ್) ಆಗಿ ಸೇವೆ ಸಲ್ಲಿಸುತ್ತಿರುವ ವಿವೇಕಾನಂದ್ ಜಿ.ತುಳಸಿಗೇರಿ ಅವರಿಗೆ ಕರ್ನಾಟಕ ಲೋಕಾಯುಕ್ತದ ಎಸ್.ಐ.ಟಿ ಎಸ್.ಪಿಯನ್ನಾಗಿ ಬಡ್ತಿ ನೀಡಿದೆ.
ಸಿಐಡಿಯಲ್ಲಿದ್ದ ಎನ್.ವೆಂಕಟೇಶ್ ಅವರಿಗೆ ಡಿಸಿಆರ್.ಇ, ಎಂ.ಎಸ್. ಕೌಲಾಪುರೆ ಅವರನ್ನು ಕರ್ನಾಟಕ ಲೋಕಾಯುಕ್ತ ಹಾಗೂ ಎ.ಆರ್. ಕರ್ನೂಲು ಅವರಿಗೆ ಕರ್ನಾಟಕ ಲೋಕಾಯುಕ್ತ ಎಸ್.ಪಿ. ಮತ್ತು ಎಚ್.ನಾಗಭೂಷಣ್ ಅವರನ್ನು ಆಂತರಿಕಾ ಭದ್ರತಾ ವಿಭಾಗಕ್ಕೆ ಮುಂಬಡ್ತಿ ನೀಡಲಾಗಿದೆ.
ಸಿಐಡಿಯಲ್ಲಿದ್ದ ಎನ್.ವೆಂಕಟೇಶ್ ಅವರಿಗೆ ಡಿಸಿಆರ್.ಇ, ಎಂ.ಎಸ್. ಕೌಲಾಪುರೆ ಅವರನ್ನು ಕರ್ನಾಟಕ ಲೋಕಾಯುಕ್ತ ಹಾಗೂ ಎ.ಆರ್. ಕರ್ನೂಲು ಅವರಿಗೆ ಕರ್ನಾಟಕ ಲೋಕಾಯುಕ್ತ ಎಸ್.ಪಿ. ಮತ್ತು ಎಚ್.ನಾಗಭೂಷಣ್ ಅವರನ್ನು ಆಂತರಿಕಾ ಭದ್ರತಾ ವಿಭಾಗಕ್ಕೆ ಮುಂಬಡ್ತಿ ನೀಡಲಾಗಿದೆ.