ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ- ಕುಂಸಿ ಮಧ್ಯೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ನಂ. 50ರಲ್ಲಿ ತಾಂತ್ರಿಕ ಪರಿಶೀಲನೆಗಾಗಿ ಮೇ 5ರ ಬೆಳಗ್ಗೆ 8 ರಿಂದ 6ರ ಸಂಜೆ 6ರ ವರೆಗೆ ಗೇಟ್ ಮುಚ್ಚುವುದರಿಂದ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ನೀಡಿದ್ದಾರೆ.
ಪರ್ಯಾಯ ಮಾರ್ಗ
ಶಿವಮೊಗ್ಗ ನಗರ- ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ನಂ.50ರ ಬದಲಿ ಮಾರ್ಗವಾಗಿ ಎಲ್.ಸಿ. 52ರ ಕಾಶಿಪುರ ಮೂಲಕ ಉಷಾ ನಸಿರ್ಂಗ್ ಹೋಮ್, ಜೈಲ್ ಸರ್ಕಲ್, ವಿನೋಬನಗರ, ಪೊಲೀಸ್ ಚೌಕಿ ಮುಖಾಂತರ ಲಘು ಮತ್ತು ಭಾರಿ ಗಾತ್ರದ ವಾಹನಗಳು ಮತ್ತು ಪಿ ಆಂಡ್ ಟಿ ಕಾಲೋನಿಯಿಂದ ಕೆಳ ರಸ್ತೆಯ ಮುಖಾಂತರ ಲಘು ವಾಹನಗಳು ಸಂಚರಿಸುವುದು, ಎಲ್.ಸಿ- 49ರ ಸವಳಂಗ ರಸ್ತೆ ಮೂಲಕ ಉಷಾ ನಸಿರ್ಂಗ್ ಹೋಮ್- ಜೈಲ್ ಸರ್ಕಲ್- ವಿನೋಬನಗರ ಪೊಲೀಸ್ ಚೌಕಿ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
READ | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ