ಸುದ್ದಿ ಕಣಜ.ಕಾಂ
ಇನ್ನೊ0ದು ತಿಂಗಳು ಕಳೆದಿದ್ದರೆ ಮನೆಗೊಂದು ಅತಿಥಿ ಆಗಮಿಸುತ್ತಿತ್ತು. ಆದರೆ, ವಿಧಿಯ ಆಟದ ಮುಂದೆ ಅದ್ಯಾವುದೂ ನಡೆಯಲಿಲ್ಲ. ಯಮಸ್ವರೂಪಿ ಕೆಎಸ್’ಆರ್’ಟಸಿ ಬಸ್ ಈ ಎಲ್ಲ ಖುಷಿಯನ್ನು ಕ್ಷಣಾರ್ಧದಲ್ಲಿಯೇ ಕಸಿದುಕೊಂಡಿದೆ.
ಆಗಿದ್ದೇನು?: ಮೆಗ್ಗಾನ್ ಆಸ್ಪತ್ರೆಗೆ ಪರೀಕ್ಷೆಗೋಸ್ಕರ ದ್ವಿಚಕ್ರದ ಮೇಲೆ ಬರುವಾಗ ಹಿಂಬದಿಯಿoದ ಬಸ್ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಕುಳಿತಿದ್ದ 8 ತಿಂಗಳ ಗರ್ಭಿಣಿ ಕೆಳಗುರುಳಿದ್ದು ಮೃತಪಟ್ಟಿದ್ದಾಳೆ.
ಸೈದರ್ ಕಲ್ಲಹಳ್ಳಿಯ ನಿವಾಸಿ ಅಂಜಲಿ (22) ಎಂಬುವವರೇ ಮೃತ ಗರ್ಭಿಣಿ. ಗ್ರಾಮದಿಂದ ಆಸ್ಪತ್ರೆಗೆ ಬರುವಾಗ ಘಟನೆ ಸಂಭವಿಸಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.