ಮಹದಾಯಿ ಕ್ಯಾತೆ, ಹೈಕಮಾಂಡ್ ಮೊರೆಗೆ ಬಿ.ಎಸ್.ವೈ ಇಂಗಿತ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನ್ಯಾಯಾಲದಯ ಹೊರಗೆ ವಿವಾದ ಇತ್ಯರ್ಥಕ್ಕೆ ಸಿದ್ಧರಿಲ್ಲ. ಅದೇನಿದ್ದೂ ಕಾನೂನಾತ್ಮಕವಾಗಿಯೇ ವಿವಾದ ಬಗೆಹರೆಯಲಿ ಎಂದಿದ್ದಾರೆ. ಆದರೆ, ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಂಬಂಧ ಹೈಕಮಾಂಡ್ ಮೊರೆ ಹೋಗಿ ಅಲ್ಲಿಯೇ ಗೋವಾ ಸಿಎಂ ಅವರನ್ನೂ ಕರೆಸಿ ಮಾತಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರು, ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹದಾಯಿ ವಿವಾದದ ಕುರಿತು ನವದೆಹಲಿಗೆ ಹೋಗಿ ಸಾವಂತ್ ಅವರನ್ನು ಕರೆಸಿ ಚರ್ಚೆ ಮಾಡಲಾಗುವುದು. ಅಂತರ್ ರಾಜ್ಯ ಜಲ ವಿವಾದ ನ್ಯಾಯಮಂಡಳಿ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ಅಲ್ಲಿಯೇ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಗೋವಾ ಸಿಎಂ ಇತ್ತೀಚೆಗೆ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!