ಸುದ್ದಿ ಕಣಜ.ಕಾಂ | DISTRICT | GOVERNMENT EMPLOYEES DAY
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಏಪ್ರಿಲ್ 21ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ವೇಳೆ, 2020-21 ಹಾಗೂ 2021-22ನೇ ಸಾಲಿನ ಸರ್ವೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ನೌಕರರನ್ನು ಗುರುತಿಸಿ, ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 20 ನೌಕರರನ್ನು ಗುರುತಿಸಲಾಗಿದೆ ಎಂದು ಹೇಳಿದರು.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ, ಹೇಳಿದ್ದೇನು?
ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ 10,000 ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ಹಿಂದೆ ಏಪ್ರಿಲ್ 21ರಂದು ನಡೆಸಲಾಗುತ್ತಿದ್ದ ನಾಗರಿಕ ಸೇವಾ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನವನ್ನಾಗಿ ಹಾಗೂ ಗಣರಾಜ್ಯೋತ್ಸವ ದಿನದಂದು ವಿತರಿಸಲಾಗುತ್ತಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್ 21ರಂದು ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ ಎಂದರು.
ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್ಕುಮಾರ್, ಕಾರ್ಯದರ್ಶಿ ಕೃಷ್ಣಮೂರ್ತಿ, ಅರುಣ್, ದಿನೇಶ್, ಲಕ್ಷ್ಮಣ್, ಸತೀಶ್ ಇತರರು ಉಪಸ್ಥಿತರಿದ್ದರು.
ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಸರ್ಕಾರಿ ನೌಕರರ ಪಟ್ಟಿ | |
ಹೆಸರು | ಇಲಾಖೆ |
2020-21ನೇ ಸಾಲಿನ ಪ್ರಶಸ್ತಿ ಪುರಸ್ಕೃತ | |
ಡಾ.ಎಂ.ಜಿ.ಚಂದ್ರಪ್ಪ | ಆರೋಗ್ಯ ಇಲಾಖೆ |
ಡಾ.ಎ.ಎಸ್.ಇರ್ಫಾನ್ ಅಹ್ಮದ್ | ಆರೋಗ್ಯ ಇಲಾಖೆ |
ಎಂ.ಜೆ.ಮಧುಕುಮಾರ್ | ಆರೋಗ್ಯ ಇಲಾಖೆ |
ಲತಾ | ಆರೋಗ್ಯ ಇಲಾಖೆ |
ಡಾ.ಎಂ.ವಿ.ಅಶೋಕ | ಆರೋಗ್ಯ ಇಲಾಖೆ |
ರಾಧಮ್ಮ | ಆರೋಗ್ಯ ಇಲಾಖೆ |
ಟಿ.ವಿ.ಕಾಂತಮ್ಮ | ಕಂದಾಯ ಇಲಾಖೆ |
ಪುಷ್ಪಲತಾ | ಕಂದಾಯ ಇಲಾಖೆ |
ಶ್ರೀನಿವಾಸ್ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ |
ಎಂ.ನೇತ್ರಮ್ಮ | ಭೂಮಾಪನ ಇಲಾಖೆ |
2021-22ನೇ ಸಾಲಿನ ಪ್ರಶಸ್ತಿ ಪುರಸ್ಕೃತ | |
ಡಿ.ಎಂ.ಬಸವರಾಜ್ | ಕೃಷಿ ಇಲಾಖೆ |
ಪಿ.ನಾಗರಾಜ್ | ಶಿಕ್ಷಣ ಇಲಾಖೆ |
ಎಚ್.ಜಿ.ಕೃಷ್ಣಪ್ರಸಾದ್ | ಕರ್ನಾಟಕ ನೀರಾವರಿ ನಿಗಮ |
ಎನ್.ಯಶವಂತ್ | ಕಂದಾಯ ಇಲಾಖೆ |
ಕೆ.ಶಿವಕುಮಾರ್ | ಜಿಲ್ಲಾ ಪಂಚಾಯಿತಿ |
ಎಂ.ಎಚ್.ಹರ್ಷ | ಕಂದಾಯ ಇಲಾಖೆ |
ಎಂ.ಟಿ.ಜಯಂತಿ | ಗ್ರಾಮೀಣಾಭಿವೃದ್ಧಿ ಇಲಾಖೆ |
ಕೋಕಿಲ | ಆರೋಗ್ಯ ಇಲಾಖೆ |
ಎನ್.ಸತೀಶ್ | ಸಮಾಜ ಕಲ್ಯಾಣ ಇಲಾಖೆ |