ಗೋಪಾಳ ಬಳಿ ಮಾರಣಾಂತಿಕ ಹಲ್ಲೆ ಮಾಡಿದವರಿಗೆ 3 ವರ್ಷ ಜೈಲು

Culprit

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಗೋಪಾಳ (Gopal) ಬಡಾವಣೆ ನಿವಾಸಿ ರಿಚರ್ಡ್ ಸಂತೋಷ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರಿಗೆ 3 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಗೋವಿಂದಪುರದ ನಿತಿನ್(22), ಶರಾವತಿನಗರದ ದೀಕ್ಷಿತ್(21), ವಿನಾಯಕ ನಗರದ ಕಿರಣ್(23) ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ. 5 ಸಾವಿರ ರೂ. ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 2 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶ ಕೆ.ಎಸ್.ಮಾನು ಆದೇಶ ಹೊರಡಿಸಿದ್ದಾರೆ.

READ | ಲಿಂಗನಮಕ್ಕಿ‌ ಜಲಾಶಯದಲ್ಲಿ 5 ಅಡಿ ನೀರು ಏರಿಕೆ, ಯಾವ ಡ್ಯಾಂನಲ್ಲಿ‌ ಎಷ್ಟು ನೀರಿದೆ? 

ಗೋಪಾಳದ ವನಸಿರಿ ಪಾರ್ಕ್ ಬಳಿ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ನಿತಿನ್, ದೀಕ್ಷಿತ್ ಮತ್ತು ಕಿರಣ್ ಎಂಬುವವರು ಭರ್ಜಿಯಿಂದ ರಿಚರ್ಡ್ ಸಂತೋಷ್ ಅವರ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ತುಂಗಾನಗರ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ಪ್ರಕರಣದ ವಾದ ಮಂಡಿಸಿದ್ದರು.

https://suddikanaja.com/2022/05/27/shivamogga-court-judgment-on-attempt-to-murder-of-a-person-near-hosamane-canal/

Leave a Reply

Your email address will not be published. Required fields are marked *

error: Content is protected !!