ಸುದ್ದಿ ಕಣಜ.ಕಾಂ | DISTRICT | 25 AUG 2022
ಶಿವಮೊಗ್ಗ: ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಬ್ಬರನ್ನು ಒಂದು ತಿಂಗಳು ಗಡಿಪಾರು (Deportation) ಮಾಡಿ ಆದೇಶಿಸಲಾಗಿದೆ.
ಆಶ್ರಯ ಬಡಾವಣೆ ಎ ಬ್ಲಾಕ್ ನಿವಾಸಿಗಳಾದ ಶಮಂತ್ ಅಲಿಯಾಸ್ ಶಮಂತ್ ನಾಯ್ಕ,(28), ಸಂದೀಪ್ ಅಲಿಯಾಸ್ ಸಂದೀಪ್ ಕುಮಾರ್(29) ಎಂಬುವವರನ್ನು ಗಡಿಪಾರು ಮಾಡಲಾಗಿದೆ.
READ | ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ, ಅದರಲ್ಲೇನಿದೆ, ಈಶ್ವರಪ್ಪ ಹೇಳಿದ್ದೇನು?
ಇಬ್ಬರ ವಿರುದ್ಧ ರೌಡಿಶೀಟ್ ಓಪನ್
ಇವರಿಬ್ಬರೂ ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗ ತರುವಂತಹ ಕೃತ್ಯಗಳನ್ನು ಎಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆಯನ್ನು ಪ್ರದರ್ಶಿಸುತ್ತಾ, ಸಾರ್ವಜನಿಕರಲ್ಲಿ ಭಯವನ್ನುಟ್ಟಿಸಿ ಅಪರಾಧಿಕ ಕೃತ್ಯಗಳನ್ನೆಸಗಿ ದುರ್ನಡತೆಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ.
ಶಮಂತ್ ವಿರುದ್ಧ ಒಟ್ಟು 15 ಪ್ರಕರಣಗಳು ಮತ್ತು ಸಂದೀಪ್ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಇವರ ಮೇಲೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ (Rowdy sheet) ತೆರೆಯಲಾಗಿದೆ.
ಇವರುಗಳು ಮುಂಬರುವ ಗಣಪತಿ ಹಬ್ಬದ ಸಮಯದಲ್ಲಿಯೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮಧಿಗೆ ಭಂಗವನ್ನುಂಟು ಮಾಡುವಂತಹ ಸಾಧ್ಯತೆ ಇದೆ. ಹಲವು ಪ್ರಕರಣಗಳನ್ನು ಧಾಖಲಿಸಿದರೂ ಅವರುಗಳ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ಇದುದ್ದರಿಂದ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಶಮಂತ್ ಮತ್ತು ಸಂದೀಪ್ ಅವರುಗಳನ್ನು ಗಡಿಪಾರು ಮಾಡುವಂತೆ ಶಿವಮೊಗ್ಗ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರು ನೀಡಿದ ವರದಿಯ ಮೇರೆಗೆ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು 2022 ಆಗಸ್ಟ್ 25ರಿಂದ ಸೆಪ್ಟೆಂಬರ್ 25ರ ವರೆಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.
https://suddikanaja.com/2021/10/30/two-accused-exiled-from-shivamogga/