ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ವಿಐಎಸ್ಎಲ್ (Vishweshwaraiah Iron and Steel Limited) ಬಗ್ಗೆ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಐಎಸ್ಎಲ್ ಮುಚ್ಚುವ ನಿರ್ಧಾರದ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ಥಿತಿ ನಮ್ಮ ಕೈಮೀರಿ ಹೋಗಿದೆ’ ಎಂದು ಹೇಳಿದರು.
READ | ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ದಿನಾಂಕ ನಿಗದಿ ಬೆನ್ನಲ್ಲೇ ಉಗ್ರ ಸ್ವರೂಪ ಹೋರಾಟದ ಎಚ್ಚರಿಕೆ, ಕಾರಣವೇನು?
ದೇಶದಲ್ಲಿ ಇನ್ನಷ್ಟು ಕಾರ್ಖಾನೆ ಮುಚ್ಚುತ್ತಿವೆ
ಮುಂದುವರಿದು ಮಾತನಾಡಿದ ಅವರು, ‘ಕಾರ್ಖಾನೆ ಸ್ಥಗಿತಗೊಳಿಸಬಾರದು ಎಂದು ನಿರಂತರ ಪ್ರಯತ್ನಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ತಾವು ಹಲವು ಸಲ ಮನವಿ ಮಾಡಲಾಗಿದೆ. ಆದರೆ, ಈಗ ಸ್ಥಿತಿ ಕೈಮೀರಿದೆ ಎಂದರು.
ಈ ನಿರ್ಧಾರ ಬರೀ ವಿಐಎಸ್ಎಲ್ ಒಂದೇ ಅಲ್ಲ. ನಷ್ಟದಲ್ಲಿರುವ ದೇಶದ ಹಲವು ಕಾರ್ಖಾನೆ ಮುಚ್ಚಲಾಗುತ್ತಿದೆ. ಅದರಲ್ಲಿ ಭದ್ರಾವತಿಯ ವಿಐಎಸ್ಎಲ್ ಕೂಡ ಒಂದು ಎಂದು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಶಪಥ ನೀಡಿದ್ದೇವೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮಾತು ನೀಡಲಾಗಿದೆ. ಅದಕ್ಕೆ ಪೂರಕವಾಗಿ ಕಾರ್ಯಕಾರಿಣಿಯಲ್ಲಿ ನೀಡಲಾಗುವ ಸೂಚನೆಯಂತೆ ಕೆಲಸ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಹಲವು ಕೇಂದ್ರದ ನಾಯಕರು ಭೇಟಿ ನೀಡಲಿದ್ದಾರೆ ಎಂದು ಹೇಳಿದರು.