ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದರೋಡೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ದರೋಡೆ ಮಾಡಿದ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಮಾ.17ರಂದು ಸಂಜೆ ಜೈಲು ರಸ್ತೆಯ ಬಳಿ ಅಪರಿಚಿತರು ಮಲ್ಲಾಪುರದ ಚಂದ್ರಶೇಖರ್(38) ಅವರ ಮೊಬೈಲ್ ಫೋನ್ ಕಿತ್ತುಕೊಂಡು ಹೋಗಿದ್ದಾರೆ. ಮತ್ತೆ ಮೊಬೈಲ್ ಕೊಡುವ ನೆಪದಲ್ಲಿ ಹೊಸಮನೆಗೆ ಬರಲು ಹಳಿ ಹಣವನ್ನು ಕಿತ್ತು ಹೋಗಿರುತ್ತಾರೆ. ಆನಂತರ ಪುನಾ ಯಾರೋ 5 ಜನ ಅಪರಿಚಿತರು ಬಂದು ಚಂದ್ರಶೇಖರ್ ಅವರಿಗೆ ನಿಮ್ಮ ಮೊಬೈಲ್ ಕೊಡಿಸುತ್ತೇವೆ ಬನ್ನಿ ಎಂದು ಆಟೋದಲ್ಲಿ ಸೋಮಿನಕೊಪ್ಪ ಹತ್ತಿರದ ಖಾಲಿ ಲೇಔಟ್ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ರಕ್ತಗಾಯ ಪಡಿಸಿ ಎಟಿಎಂ ಕಾರ್ಡ್ ಅನ್ನು ಕಿತ್ತುಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
READ | ಶಿವಮೊಗ್ಗದ ಪ್ರಮುಖ ವೃತ್ತವೊಂದಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಸಿಎಂಗೆ ಮನವಿ, ಯಾವದೀ ಸರ್ಕಲ್?
ಆರೋಪಿಗಳನ್ನು ಬಂಧಿಸಿದ ಪೊಲೀಸರು
ಕಲ್ಲಳ್ಳಿ ಕಾಶಿಪುರದ ಡಿ.ರಾಜು ಅಲಿಯಾಸ್ ಚೊಟ್ಟ(29), ಹೊಸಮನೆಯ ಈಶ್ವರ(28), ರಾಜು ಅಲಿಯಾಸ್ ಗುನ್ನಾ(20), ಶರಾವತಿ ನಗರದ ಎ.ಎಲ್.ಮಣಿಕಂಠ, ಬೊಮ್ಮನಕಟ್ಟೆಯ ವಿಜಯ್(25), ಹೊಸಮನೆಯ ರಘು (21) ಎಂಬುವವರನ್ನು ಬಂಧಿಸಲಾಗಿದೆ. ಇನ್ನೂ ಮೂರು ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಪ್ರಕರಣ ದಾಖಲಾದ 24 ಗಂಟೆಯಗಳ ಒಳಗಾಗಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಳಿಯಿಂದ ವಿನೋಬನಗರ ಪೊಲೀಸ್ ಠಾಣೆಯ 1 ದರೋಡೆ ಮತ್ತು 1 ಸುಲಿಗೆ ಪ್ರಕರಣ ಸೇರಿ ಒಟ್ಟು 2 ಪ್ರರಕಣಗಳಿಗೆ ಸಂಬಂಧಿಸಿದ 2 ಎಟಿಎಂ ಕಾರ್ಡುಗಳು, ಒಂದು ಮೊಬೈಲ್ ಮತ್ತು ನಗದು ಹಣ ರೂ ₹9,200 ನಗದನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡವು ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದು, ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್.ಪಿ.ಜಿ.ಕೆ. ಮಿಥುನ್ ಕುಮಾರ್ ಪ್ರಶಂಶಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ
ಪ್ರಕರಣದಲ್ಲಿ ಕಳವಾದ ವಸ್ತುಗಳು ಮತ್ತು ಆರೋಪಿತರನ್ನು ಪತ್ತೆ ಹಚ್ಚಲು ಎಸ್.ಪಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್.ಪಿ ಎಂ.ಸುರೇಶ್ ಮೇಲ್ವಿಚಾರಣೆಯಲ್ಲಿ ವಿನೋಬನಗರ ಪೊಲೀಸ್ ನಿರೀಕ್ಷಕ ಸಂಜೀವ್ ಕುಮಾರ ಜೆ. ಮಹಾಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ತಂಡದಲ್ಲಿ ಪಿಎಸ್.ಐಗಳಾದ ಬಿ.ಸಿ.ಸುನೀಲ್, ಟಿ.ಡಿ ಸಾಗರಕರ್, ಎಎಸ್ಐಗಳಾದ ಟಿ.ಎಸ್.ವಿರೇಶಪ್ಪ, ರಮೇಶ್, ಸಿಬ್ಬಂದಿ ರಾಜು, ಚಂದ್ರನಾಯ್ಕ, ಮಲ್ಲಪ್ಪ, ಅರುಣ್ ಕುಮಾರ್, ಮೂರ್ತಿ, ವಿಜಯ ಕುಮಾರ ಓಲಿ ತನಿಖಾ ಇದ್ದರು.
Court news | ಇಬ್ಬರು ಮಕ್ಕಳೊಂದಿಗೆ ಭದ್ರಾ ಚಾನಲ್’ಗೆ ಹಾರಿ ಮೃತಪಟ್ಟಿದ್ದ ಕೇಸ್, ಪತಿಗೆ ಜೈಲು ಶಿಕ್ಷೆ