ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಿಗಂದೂರು ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ವೀಕ್ಷಣೆಗೆ ಬರಲು ಸಮಯ ನಿಗದಿಪಡಿಸುವುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಜೈರಾಂ ಗಡ್ಕರಿ ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಸಚಿವರಿಗೆ ಭೇಟಿಯಾಗಿ ಸಿಗಂಧೂರು ಸೇತುವೆ ಮತ್ತು ವಿದ್ಯಾನಗರ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಪ್ರಗತಿ, ರಾಷ್ಟ್ರೀಯ ಹೆದ್ದಾರಿ 766ಸಿ ನ ಮಾವಿನಕೊಪ್ಪ ವೃತ್ತದಿಂದ ಆಡುಗೋಡಿವರೆಗಿನ 1380 ಕಿ.ಮೀ ಉದ್ದದ ರಸ್ತೆ ಹಾಗು ಬೆಕ್ಕೋಡಿ ಮತ್ತು ಹೊಸನಗರ ಸೇತುವೆಗಳ ಬಗ್ಗೆ ದಾಖಲೆಗಳೊಂದಿಗೆ ವಿವರಣೆ ನೀಡಿದದರು. ಆಗ ಕಾಮಗಾರಿಗಳ ವೀಕ್ಷಣೆಗೆ ಬರಲು ಸಮಯ ನಿಗದಿಗೊಳಿಸುವುದಾಗಿ ತಿಳಿಸಿದ್ದಾರೆ.
READ | ಹಣಗೆರೆಕಟ್ಟೆ ದೇವಸ್ಥಾನ ಟ್ರಾಫಿಕ್ ಜಾಮ್ ತಡೆಯಲು ಪೊಲೀಸರ ಖಡಕ್ ಕ್ರಮ, ಸಭೆಯಲ್ಲಿ ನೀಡಿದ 7 ಸೂಚನೆಗಳೇನು?
ಬಿ.ವೈ.ರಾಘವೇಂದ್ರ ಸಚಿವರಿಗೆ ಹೇಳಿದ್ದೇನು?
- ಶಿವಮೊಗ್ಗ ನಗರದ ಉತ್ತರ ಭಾಗದ ಬೈಪಾಸ್ ರಸ್ತೆಯ ಅಗತ್ಯತೆಯನ್ನು ವಿವರಿಸಿ, ಭೂಸ್ವಾಧೀನ ವೆಚ್ಚದ ಪಾಲುದಾರಿಕೆಯ ಬಗ್ಗೆ ತಿಳಿಸಿ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಉತ್ತರ ಭಾಗದ ಬೈಪಾಸ್ ರಸ್ತೆ ನಿಮಾಣದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ ಈವರೆವಿಗೆ ಮಾಡಿದ ಪ್ರಯತ್ನಗಳನ್ನು ದಾಖಲೆಗಳೊಂದಿಗೆ ವಿವರಿಸಿದರು. ಮಂಜೂರಾತಿಗೆ ಇದ್ದ ಸಮಸ್ಯೆಗಳನ್ನು ವಿವರಿಸಲಾಗಿ, ಕೇಂದ್ರ ಭೂ ಸಾರಿಗೆ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಮಂಜೂರಾತಿಗೆ ಇರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ತಕ್ಷಣ ಮಂಜೂರಾತಿ ನೀಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿರುತ್ತಾರೆ. ಇದರಿಂದಾಗಿ ನಗರದ ಉತ್ತರ ಭಾಗದ ವರ್ತುಲ ರಸ್ತೆಯ ಮಂಜೂರಾತಿ ಪ್ರಕ್ರಿಯೆ ಚಾಲನೆಗೊಂಡಿದ್ದು, ಶೀಘ್ರದಲ್ಲಿ ಯೋಜನೆಗೆ ಮಂಜೂರಾತಿ ಪಡೆದು ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ.
- ಶಿವಮೊಗ್ಗ ನಗರದಿಂದ ಹೊನ್ನಾಳಿ, ಹರಿಹರ ಮೂಲಕ ಮರಿಯಮ್ಮನ ಹಳ್ಳಿ(ಹೊಸಪೇಟೆ) ವರೆಗಿನ ರಾಜ್ಯ ಹೆದ್ದಾರಿ 25 ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ಮರ್ಜೆಗೇರಿಸಿ 4 ಪಥದ ರಸ್ತೆ ನಿರ್ಮಾಣ ಮಾಡಲು ಸಹ ಕೇಂದ್ರ ಸಚಿವರಿಗೆ ಸಂಸದರು ಕೋರಿದ್ದು, ಇದರ ಅಗತ್ಯತೆ ಹಾಗೂ ಪ್ರಸ್ತಾವನೆಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಿರುವ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಟ್ಟಿದ್ದು, ಸಚಿವರು ಸದ್ಯ ಸದರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಲು ಇರುವ ಸಮಸ್ಯೆಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಸದರಿ ರಾಜ್ಯ ಹೆದ್ದಾರಿಯನ್ನು ಮೇಲ್ಮರ್ಜೆಗೇರಿಸಿ ಅಭಿವೃದ್ಧಿಗೊಳಿಸಿಕೊಡುವ ಬಗ್ಗೆ ತಿಳಿಸಿರುತ್ತಾರೆ.
- ಭೂಸಾರಿಗೆ ಮಂತ್ರಾಲಯದಿಂದ ಮಂಜೂರಾತಿಯಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಇದರಿಂದಾಗಿ ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಜೂರಾದ
ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕೋರಿದ್ದು, ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಭೆ ನಡೆಸಿ ಸೂಚಿಸಿ ತ್ವರಿತವಾಗಿ ಅನುಷ್ಠಾನಗೊಳಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.
Blood Donor Day | ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ? ರಕ್ತದ ಮಹತ್ವವೇನು? ರಕ್ತದಾನ ಪ್ರಯೋಜನಗಳೇನು?