ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾ ರೈಸ್ ಮಿಲ್ ನ ಹತ್ತಿರ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಐವರನ್ನು ಗಾಂಜಾ (Ganja) ಸಹಿತ ಬಂಧಿಸಿದ್ದಾರೆ.
READ | ಕುವೆಂಪು ವಿವಿಯಲ್ಲಿ ಸಹ್ಯಾದ್ರಿ ಸಿನಿಮೋತ್ಸವ, ಯಾವ್ಯಾವ ಸಿನಿಮಾಗಳ ಪ್ರದರ್ಶನ?
ಶಿವಮೊಗ್ಗದ (shimoga) ಆರ್.ಎಂ.ಎಲ್ ನಗರ ನಿವಾಸಿ ಮಹಮ್ಮದ್ ಅಜುರುದ್ದೀನ್ ಅಲಿಯಾಸ್ ಅಜ್ಜು(24), ಭದ್ರಾವತಿಯ ಮೋಮಿನ್ ಮೊಹಲ್ಲಾ ನಿವಾಸಿ ಇಲಿಯಾಜ್ ಬೇಗ್ ಅಲಿಯಾಸ್ ಇಲ್ಲು (22), ಕೇರಳದ (keral) ಮಲಪುರಂನ ಸೈನುದ್ದೀನ್ ಅಕಿಯಾಸ್ಯ ಸೈನು(38), ಮೋಮಿನ್ ಮೊಹಲ್ಲಾದ ಸಮೀರ್ ಖಾನ್ ಅಲಿಯಾಸ್ ಮೋಟಾ ಸಮೀರ್(23), ಶಿವಮೊಗ್ಗದ ಜೆ.ಪಿ.ನಗರ ನಿವಾಸಿ ಅರ್ಬಾಜ್ ಅಲಿಯಾಸ್ ಹಜರತ್(22) ಬಂಧಿತರು. ಆರೋಪಿತರಿಂದ ಅಂದಾಜು ₹51,000 ಮೌಲ್ಯದ 1 ಕೆ.ಜಿ 361 ಗ್ರಾಂ ತೂಕದ ಒಣ ಗಾಂಜಾ, ಅಂದಾಜು ₹40,000 ಮೌಲ್ಯದ ದ್ವಿ ಚಕ್ರ ವಾಹನ ಮತ್ತು ₹800 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿಪಿಎಸ್(NDPS) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಭದ್ರಾವತಿ ಉಪ ವಿಭಾಗದ ಡಿ.ವೈ.ಎಸ್.ಪಿ ಕೆ.ಆರ್. ನಾಗರಾಜ್ ಮಾರ್ಗದರ್ಶನದಲ್ಲಿ ಹಳೆನಗರ ಪೊಲೀಸ್ ಠಾಣೆ ಪಿ.ಎಸ್.ಐ ಶರಣಪ್ಪ ಹಂಡ್ರಗಲ್ ನೇತೃತ್ವದಲ್ಲಿ ಸಿಬ್ಬಂದಿಯ ತಂಡ ದಾಳಿ ನಡೆಸಿದೆ.