ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೊರಬ ಮಾಜಿ ಶಾಸಕ ಕುಮಾರ ಬಂಗಾರಪ್ಪ (Kumar Bangarappa) ಅವರು ಹತ್ತು ತಿಂಗಳುಗಳ ಬಳಿಕ ಬಿಜೆಪಿಯ ವೇದಿಕೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ನಗರದ ಅಲ್ಲಮಪ್ರಭು ಮೈದಾನ (Allamapra Field)ದಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕುಮಾರ ಬಂಗಾರಪ್ಪ ದಿಢೀರ್ ಪ್ರತ್ಯಕ್ಷರಾದರು. ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
READ | ಶಿವಮೊಗ್ಗದ್ದು ಯಾವ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ
ಚಪ್ಪಾಳೆ, ಶಿಳ್ಳೆ ಹೊಡೆದು ಸ್ವಾಗತ
ಕುಮಾರ ಬಂಗಾರಪ್ಪ ವೇದಿಕೆಯ ಮೇಲೆ ಬಂದಾಕ್ಷಣ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಮಾಜಿ ಶಾಸಕರಿಗೋಸ್ಕರ ಮೀಸಲು ಇಟ್ಟಿದ್ದ ಎರಡನೇ ಸಾಲಿನಲ್ಲಿ ಅವರು ಕುಳಿತಿದ್ದರು. ನಂತರ ಅವರನ್ನು ಬಿ.ವೈ.ರಾಘವೇಂದ್ರ ಅವರು ಕರೆದುಕೊಂಡು ಬಂದು ಮುಂದಿನ ಸಾಲಿನಲ್ಲಿ ಕೂರಿಸಿದರು.
ಹರಡಿದ್ದವು ಹಲವು ಊಹಾಪೋಹಗಳು
ಕುಮಾರ ಬಂಗಾರಪ್ಪ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಊಹಾಪೋಹದ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪೂರಕವಾಗಿ ಅವರೂ ವಿಧಾನಸಭೆ ಚುನಾವಣೆ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಗೀತಾ ಶಿವರಾಜಕುಮಾರ್ ಅವರಿಗೆ ಟಿಕೆಟ್ ಘೋಷಣೆ ಆಗಿದ್ದೇ ಈ ಚರ್ಚೆಗೆ ತೆರೆಬಿದ್ದಿತ್ತು.