ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಸದಾ ತಮ್ಮ ಭಿನ್ನ ನಡತೆಯ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಸಲ ಶಿವಮೊಗ್ಗದಲ್ಲೂ ಅದೇ ನಡೆದಿದೆ.
ನಗರದ ಅಲ್ಲಮಪ್ರಭು ಮೈದಾನ (Allamaprabhu Field) ದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಜನರ ನಡುವೆಯಿಂದಲೇ ತೆರೆದ ವಾಹನದಲ್ಲಿ ಆಗಮಿಸಿದ್ದರು. ತಮ್ಮ ಹತ್ತಿರದಿಂದಲೇ ಹಾದು ಹೋದದ್ದನ್ನು ಕಂಡು ನಮೋ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಅವರು ತೆರೆದ ವಾಹನದಲ್ಲಿ ಮೋದಿ ಅವರೊಂದಿಗೆ ಇದ್ದರು.
READ | 10 ತಿಂಗಳುಗಳ ಬಳಿಕ ಬಿಜೆಪಿ ವೇದಿಕೆ ಕಾರ್ಯಕ್ರಮದಲ್ಲಿ ಕುಮಾರ ಬಂಗಾರಪ್ಪ ಪ್ರತ್ಯಕ್ಷ!
ಅನತಿ ದೂರದಲ್ಲೇ ಮೋದಿ ಕಂಡು ಫಿದಾ
ವೇದಿಕೆಯ ಮುಂಭಾಗದಲ್ಲಿ ಸಾಕಷ್ಟು ವಿಶಾಲವಾದ ಜಾಗವನ್ನು ಬಿಡಲಾಗಿತ್ತು. ಅಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಸ್ಜಿಪಿ ಸಿಬ್ಬಂದಿ ವಾಹನದ ಸುತ್ತಲೂ ಭದ್ರತೆ ನೀಡಿದರು. ನೇರವಾಗಿ ಮೆಂಡಾಲಿನೊಳಗೆ ವಾಹನದಲ್ಲೇ ಆಗಮಿಸಿದ ಅವರು ಅಭಿಮಾನಿಗಳನ್ನು ನಮಿಸಿದರು.