ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (Akhil Bharat Veerashaiva Mahasabha)ದ ಜಿಲ್ಲಾ ಘಟಕದ ಚುನಾವಣೆಯು ಎನ್.ಡಿವಿ ಹಾಸ್ಟೆಲ್ ನಲ್ಲಿ ಭಾನುವಾರ ನಡೆಯಿತು. ರುದ್ರಮುನಿ ಎನ್.ಸಜ್ಜನ್ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದರು.
ನಾಲ್ಕನೇ ಸಲ ಅಧ್ಯಕ್ಷರಾಗಿ ಆಯ್ಕೆಯಾದ ಇವರು 2010ರಿಂದ ಅವಿರೋಧವಾಗಿ ಆಯ್ಕೆ ಆಗುತ್ತಾ ಬಂದಿದ್ದರು. ಈ ಸಲ ಶಿವಮೊಗ್ಗ ಮತ್ತು ಶಿಕಾರಿಪುರದವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರಿಂದ ಭಾನುವಾರ ಬೆಳಗ್ಗೆ ಮತದಾನ ನಡೆದಿತ್ತು.
ಆಶ್ವಿನ್ ಮತ್ತು ಸಜ್ಜನ್ ನಡುವೆ ತೀವ್ರ ಪೈಪೋಟೆ ನಡೆದಿತ್ತು. ಮತ ಎಣಿಕೆ ಸಂದರ್ಭದಲ್ಲೂ ಏರಿಳಿತ ಕಾಣುತ್ತಿತ್ತು.
READ | ಗಾಜನೂರು ಡ್ಯಾಂಗೆ ಸಂಸದ ಬಿ.ವೈ.ರಾಘವೇಂದ್ರ ಬಾಗಿನ ಅರ್ಪಣೆ, ಬಜೆಟ್ ಬಗ್ಗೆ ಹೇಳಿದ್ದೇನು?