ಸುದ್ದಿ ಕಣಜ.ಕಾಂ
ಸೊರಬ: ಅತ್ತೆ ಅಳಿಯ ಸೇರಿ ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
https://www.suddikanaja.com/2021/03/19/gold-polishing-fraudsters-active-in-shivamogga/
ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ಮರಿಯಪ್ಪ ಗೋಪಿನಾಯ್ಕ್ ಮತ್ತು ಕಮಲಮ್ಮ ನಿಂಘಬಸಪ್ಪ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 37 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಅನುಮಾನಾಸ್ಪದವಾಗಿ ಓಡಾಡುತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಗೊತ್ತಾಯ್ತು | ಪೊಲೀಸರು ವಿಚಾರಣೆ ನಡೆಸಿದಾಗ ಜನವರಿ 31ರಂದು ಸೊರಬದಲ್ಲಿ ಪ್ರೇಮಾ ಎಂಬುವವರ ಮನೆಯಲ್ಲಿ ಕಳವು ಮಾಡಿದ್ದ ಪ್ರಕರಣದ ವಿಚಾರವೂ ಬೆಳಕಿಗೆ ಬಂದಿದೆ.
ಕದ್ದ ಚಿನ್ನವನ್ನು ಒತ್ತೆ ಒಟ್ಟಿದ್ದರು | ಮನೆಗಳಲ್ಲಿ ಕಳವು ಮಾಡಿದ್ದ ಚಿನ್ನವನ್ನು ಅತ್ತೆಯ ಹೆಸರಿನಲ್ಲಿ 10 ಗ್ರಾಂ ಬಂಗಾರವನ್ನು ಇಡಲಾಗಿದೆ. ಇನ್ನುಳಿದ 27 ಗ್ರಾಂ ಚಿನ್ನವನ್ನು ಅತ್ತೆಗೆ ನೀಡಿ, ಖಾಸಗಿ ಬ್ಯಾಂಕ್ನಲ್ಲಿ ಇಡುವಂತೆ ತಿಳಿಸಿದ್ದನು ಎಂದು ತಿಳಿದುಬಂದಿದೆ.
ಸೊರಬ ಸಿಪಿಐ ಮರುಳು ಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಶಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
https://www.suddikanaja.com/2020/11/10/netherlands-parcel/