ಸುದ್ದಿ ಕಣಜ.ಕಾಂ ಸೊರಬ
SORABA: ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ಬುಧವಾರ ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯು ಮೃತಪಟ್ಟಿದೆ.
READ | ಮಲೆನಾಡಿನಲ್ಲಿ ಭೂಕುಸಿತ 1,352 ಗ್ರಾಮಗಳನ್ನು ಗುರುತಿಸಿದ ಸರ್ಕಾರ, ಮೀಸಲಿಟ್ಟ ಅನುದಾನವೆಷ್ಟು?
ಗ್ರಾಮಸ್ಥರೊಬ್ಬರು ತಮ್ಮ ಬೆಳೆ ರಕ್ಷಣೆಗಾಗಿ ಹಂದಿಗೆ ತಂತಿ ಉರುಳು ಹಾಕಿದ್ದರು. ಅದರಲ್ಲಿ ಚಿರತೆ ಸಿಲುಕಿದೆ. ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದಿಂದ ಅರಿವಳಿಕೆ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುವ ಹೊತ್ತಿಗೆ ಚಿರತೆಯು ಮೃತಪಟ್ಟಿದೆ. ಮೃತಪಟ್ಟ ಚಿರತೆಯ ಅಂತ್ಯಸಂಸ್ಕಾರ ಮಾಡಲಾಯಿತು.