ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಎನ್.ಟಿ.ರಸ್ತೆಯ ಸುಂದರಾಶ್ರಯ ಲಾಡ್ಜ್ ಎದುರು ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಸಂಬಂಧ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ । ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಮರ್ಡರ್, ಇಬ್ಬರು ರೌಡಿಶೀಟರ್ ಸೇರಿ ನಾಲ್ವರು ಅಂದರ್
ಮಾರ್ನಮಿಬೈಲು ನಿವಾಸಿ ಫರಾಜ್, ಆರ್ಎಂಎಲ್ ನಗರದ ಸೈಯದ್ ಸಗೀರ್, ಆಜಾದ್ ನಗರದ ಮಜೀಬ್ ಉರ್ ರೆಹಮಾನ್ ಅಲಿಯಾಸ್ ಟೀಪು ಎಂಬುವವರನ್ನು ಬಂಧಿಸಲಾಗಿದೆ.
ಏನಿದು ಘಟನೆ | ಕುಡಿದ ಅಮಲಿನಲ್ಲಿ ಕೆ.ಆರ್.ಪುರಂ ನಿವಾಸಿ ಜೀವನ್ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆತನೊಂದಿಗಿದ್ದ ಸೀಗೆಹಟ್ಟಿಯ ಕೇಶವ್ ಎಂಬುವವನ ಮೇಲೆಯೂ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದುವರೆಗೆ ಏಳು ಜನರ ಬಂಧನ | ಈ ಹಿಂದೆ ಆದಿಲ್ ಪಾಶಾ, ಪ್ರತಾಪ್, ಮಹಮದ್ ಸಮೀರ್, ಸಕ್ಲೈನ್ ಮುಸ್ತಾಕ್ ಎಂಬುವವರನ್ನು ಬಂಧಿಸಲಾಗಿತ್ತು. ಇದುವರೆಗೆ ಕೊಲೆ ಪ್ರಕರಣದಲ್ಲಿ ಏಳು ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ.